Film News

ಚಂದ್ರಯಾನದ ಬಗ್ಗೆ ಟ್ವೀಟ್ ಮಾಡಿದ ಪ್ರಕಾಶ್ ರಾಜ್, ಹಿಂದೆ ಮಾಡಿದ ಟ್ವೀಟ್ ಕಾರಣದಿಂದ ಸಖತ್ ಟ್ರೋಲ್ ಆದ ನಟ….!

ವಿಲಕ್ಷಣ ನಟ ಪ್ರಕಾಶ್ ರಾಜ್ ಕಳೆದೆರಡು ದಿನಗಳ ಹಿಂದೆಯಷ್ಟೆ ಚಂದ್ರಯಾನ-3 ರ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಕಾರಣರಾಗಿದ್ದರು. ಆತನ ವಿರುದ್ದ ಅನೇಕರ ಆಕ್ರೋಷ ಹೊರಹಾಕಿದ್ದರು. ಜೊತೆಗೆ ಈ ಸಂಬಂಧ ಪ್ರಕರಣ ಸಹ ದಾಖಲಾಗಿತ್ತು.  ಇದೀಗ ಮತ್ತೊಮ್ಮೆ ಚಂದ್ರಯಾನ ಯಶಸ್ಸಿನ ಬಗ್ಗೆ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಪ್ರಕಾಶ್ ರಾಜ್ ರವರನ್ನು ಸೋಷಿಯಲ್ ಮಿಡಿಯಾದಲ್ಲಿ ಹಿಗ್ಗಾ ಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಚಂದ್ರಯಾನ ಯಶಸ್ಸಿನ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಇಸ್ರೋಗೆ ಧನ್ಯವಾದಗಳನ್ನು ಹೇಳಿದ್ದಾರೆ. ಇದು ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳು. ಧನ್ಯವಾದಗಳು ಇಸ್ರೋ, ಚಂದ್ರಯಾನ 3, ವಿಕ್ರಮ ಲ್ಯಾಂಡರ್‍ ಮತ್ತು ಇದನ್ನು ಸಾಧ್ಯವಾಗಿಸಿದಂತಹ ಎಲ್ಲರಿಗೂ ವಿಶಾಲ ವಿಶ್ವದ ಇನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು ಇದು ದಾರಿಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಕಡಿಮೆ ಸಮಯದಲ್ಲೆ ಸಖತ್ ವೈರಲ್ ಆಗಿದೆ. ಸಾವಿರಾರೂ ಲೈಕ್ ಗಳು, ಸಾವಿರಾರು ರೀಟ್ವೀಟ್ ಮಾಡಲಾಗಿದೆ. ಜೊತೆಗೆ ಈ ಟ್ವೀಟ್ ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಹಿಂದೆ ಮಾಡಿದ ಟ್ವೀಟ್ ಕಾರಣದಿಂದ ಹಿಗ್ಗಾಮುಗ್ಗಾ ತರಾಟೆಗೆ ಸಹ ತೆಗೆದುಕೊಂಡಿದ್ದಾರೆ.

ಇನ್ನೂ ಈ ಹಿಂದೆ ಪ್ರಕಾಶ್ ರಾಜ್ ಚಾಯ್ ಮಾರುವಂತಹ ವ್ಯಕ್ತಿಯ ಚಿತ್ರವನ್ನು ಹಂಚಿಕೊಂಡು, ಚಂದ್ರನ ಅಂಗಳದಿಂದ ಬಂದಂತಹ ಮೊದಲ ಚಿತ್ರ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಹಂಚಿಕೊಂಡ ಕೂಡಲೇ ಆತನ ವಿರುದ್ದ ದೊಡ್ಡ ಮಟ್ಟದಲ್ಲೇ ಆಕ್ರೋಷ ವ್ಯಕ್ತವಾಗಿತ್ತು. ಇನ್ನೂ ಈ ಬಗ್ಗೆ ಆಕ್ರೋಷ ವ್ಯಕ್ತವಾಗುತ್ತಿದ್ದಂತೆ ಇದೋಂದು ಹಳೇಯ ಜೋಕ್ ಎಂದು ಬಣ್ಣ ಹಚ್ಚುವ ಪ್ರಯತ್ನ ಮಾಡಿದರು. ಆದರೆ ನೆಟ್ಟಿಗರು ಮಾತ್ರ ಅವರನ್ನು ಸುಮನ್ನೆ ಬಿಡದೇ ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು. ಈ ಸಂಬಂಧ ದೂರು ಸಹ ದಾಖಲಾಗಿತ್ತು. ಇದೀಗ ಚಂದ್ರಯಾನ ಯಶಸ್ವಿಯ ಬಗ್ಗೆ ಮೆಚ್ಚುಗೆಯ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.

ಇನ್ನೂ ಚಂದ್ರಯಾನ ಯಶಸ್ವಿಯಾದ ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಗೆ ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಚಾಯ್ ಮಾರುವ ವ್ಯಕ್ತಿಯ ಪೊಟೋ ಹಂಚಿಕೊಂಡು ಚಂದ್ರನಿಂದ ಬಂದ ಮೊದಲ ಪೊಟೋ ಎಂದು ಟ್ವೀಟ್ ಮಾಡಿದ್ದರು. ಅದೇ ಮಾದರಿಯಲ್ಲಿ ಇದೀಗ ಪ್ರಕಾಶ್ ರಾಜ್ ಕೆಸರಿನಲ್ಲಿರುವ ಒಕ್ಕಡು ಎಂಬ ತೆಲುಗು ಸಿನೆಮಾದ ಒಂದು ದೃಶ್ಯವನ್ನು ಬಳಸಿಕೊಂಡು ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

Most Popular

To Top