Film News

ನಿಮಗೆ ತಿಳಿದಿರೋದು ಹನಿಯಷ್ಟು, ಸಮಸ್ಯೆಯಿರೋದು ಸಾಗರದಷ್ಟು ಎಂದ ಕಲ್ಯಾಣ್ ದೇವ್, ವೈರಲ್ ಆದ ಕಾಮೆಂಟ್ಸ್……!

ಸುಮಾರು ದಿನಗಳಿಂದ ಮೆಗಾಸ್ಟಾರ್‍ ಚಿರಂಜೀವಿ ಪುತ್ರಿ ಶ್ರೀಜಾ ಹಾಗೂ ಆಕೆಯ ಪತಿ ಕಲ್ಯಾಣ್ ದೇವ್ ನಡುವೆ ವಿಬೇದಗಳು ಏರ್ಪಟ್ಟು ಇಬ್ಬರೂ ಬೇರೆಯಾಗಿದ್ದಾರೆ. ಶೀಘ್ರದಲ್ಲೇ ವಿಚ್ಚೇದನ ಸಹ ಪಡೆದುಕೊಳ್ಳಲಿದ್ದಾರೆ ಎಂದು ಸಹ ಸುದ್ದಿಗಳು ಕೇಳಿಬಂದವು. ಆದರೆ ಈ ಬಗ್ಗೆ ಮೆಗಾ ಫ್ಯಾಮಿಲಿ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಮೆಗಾ ಕುಟುಂಬದಿಂದ ಕಲ್ಯಾಣ್ ದೇವ್ ದೂರವೇ ಇದ್ದಾರೆ. ಜೊತೆಗೆ ಆಗಾಗ ಕೆಲವೊಂದು ಪೋಸ್ಟ್ ಗಳ ಮೂಲಕ ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿರುತ್ತಾರೆ.

ಶ್ರೀಜಾ ಹಾಗೂ ಕಲ್ಯಾಣ್ ದೇವ್ ನಡುವೆ ವಿಬೇದಗಳು ಏರ್ಪಟ್ಟ ಬಳಿಕ ಕಲ್ಯಾಣ್ ದೇವ್ ಮೆಗಾ ಕುಟುಂಬದಿಂದ ಬೇರೆಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವೊಂದು ಎಮೋಷನಲ್ ಕಾಮೆಂಟ್ಸ್ ಸಹ ಮಾಡುತ್ತಿರುತ್ತಾರೆ. ಅನೇಕ ಬಾರಿ ಕಲ್ಯಾಣ್ ದೇವ್ ತನ್ನ ಮಗಳ ಬಗ್ಗೆ ಮಾತ್ರ ಕಾಮೆಂಟ್ ಮಾಡುತ್ತಿದ್ದರು. ಅವರ ಮಗಳಿಗಾಗಿ ಆಗಾಗ ಎಮೋಷನಲ್ ಆಗಿ ಪೋಸ್ಟ್ ಮಾಡುತ್ತಿದ್ದರು. ಇನ್ನೂ ಶ್ರೀಜಾ ಸಹ ಕಲ್ಯಾಣ್ ದೇವ್ ಬಗ್ಗೆ ಎಲ್ಲೂ ಯಾವುದೇ ರೀತಿಯ ವಿಚಾರಗಳನ್ನು ಹಂಚಿಕೊಳ್ಳುತ್ತಿಲ್ಲ. ಆದರೆ ಇಬ್ಬರ ನಡುವೆ ವಿಬೇದಗಳು ಸೃಷ್ಟಿಯಾಗಿರುವುದು ಮಾತ್ರ ನಿಜ ಎಂದು ಹೇಳಲಾಗುತ್ತಿದೆ. ಇದೀಗ ಕಲ್ಯಾಣ್ ದೇವ್ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅವರ ಪೋಸ್ಟ್ ಗಮನಿಸಿದರೇ ಅವರ ನಡುವೆ ನಡೆಯುತ್ತಿರುವ ರೂಮರ್‍ ಗಳಿಗೆ ಮತಷ್ಟು ಬಲ ತಂದುಕೊಡುವಂತಿದೆ ಎನ್ನಲಾಗಿದೆ.

ಇನ್ನೂ ಕಲ್ಯಾಣ್ ದೇವ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಮಾಡಿರುವ ಪೋಸ್ಟ್ ನಲ್ಲಿರುವಂತೆ, ಕೆಲವರನ್ನು ನೋಡಿದರೇ ಕನಿಕರ ಪಡಬೇಕು ಎನ್ನಿಸುತ್ತದೆ, ಏಕೆಂದರೇ ಅವರಿಗೆ ತಿಳಿದಿರುವುದು ಹನಿಯಷ್ಟು ಮಾತ್ರ, ಸಮಸ್ಯೆ ಬಗ್ಗೆ ತಿಳಿಯುವುದು ಸಮುದ್ರದಷ್ಟಿದೆ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಜೀವನದಲ್ಲಿ ಎಂತಹ ಸಮಸ್ಯೆಗಳು ಇವೆ ಎಂಬುದು ಹೊರಗಿನ ವ್ಯಕ್ತಿಗಳಿಗೆ ಸರಿಯಾದ ಅವಗಾಹನೆ ಇರುವುದಿಲ್ಲ ಎಂಬ ಅರ್ಥ ಬರುವಂತೆ ಕಲ್ಯಾಣ್ ದೇವ್ ಈ ಪೋಸ್ಟ್ ಮಾಡಿದ್ದಾರೆ. ಸದ್ಯ ಕಲ್ಯಾಣ್ ದೇವ್ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಹಿಂದೆ ಕಲ್ಯಾಣ್ ದೇವ್ ನಟಿಸುವಂತಹ ಸಿನೆಮಾಗಳಿಗೆ ಮೆಗಾ ಕುಟುಂಬದಿಂದ ಒಳ್ಳೆಯ ಸಪೋರ್ಟ್ ಸಿಗುತ್ತಿತ್ತು. ಆದರೆ ಅವರ ಸಿನೆಮಾಗಳಿಗೆ ಯಾವುದೇ ಸಪೋರ್ಟ್ ಸಿಗುತ್ತಿಲ್ಲ. ಅಷ್ಟೇಅಲ್ಲದೇ ಕಲ್ಯಾಣ್ ದೇವ್ ಸಹ ಸಿನೆಮಾಗಳಿಂದ ಕೊಂಚ ದೂರವೇ ಇದ್ದಾರೆ. ಇನ್ನೂ ಕಲ್ಯಾಣ್ ದೇವ್ ಹಂಚಿಕೊಳ್ಳುವ ಪೋಸ್ಟ್ ಗಳು ವೈರಲ್ ಆಗುತ್ತಿರುತ್ತವೆ. ಇನ್ನೂ ಶ್ರೀಜಾ ಹಾಗೂ ಕಲ್ಯಾಣ್ ದೇವ್ ರವರ ವಿಚ್ಚೇದನದ ರೂಮರ್‍ ಬಗ್ಗೆ ಮೆಗಾ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Most Popular

To Top