News

ಕರಿಮಣಿ ಮಾಲೀಕ ನೀನಲ್ಲ ಎಂದ ಪತ್ನಿ, ಬೇಸತ್ತ ಪತಿ ಆತ್ಮಹತ್ಯೆ, ರೀಲ್ಸ್ ನಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ…….!

ಸೋಷಿಯಲ್ ಮಿಡಿಯಾದಲ್ಲಿ ಕೆಲವು ದಿನಗಳಿಂದ ರೀಯಲ್ ಸ್ಟಾರ್‍ ಉಪೇಂದ್ರ ಅಭಿನಯದ ಉಪೇಂದ್ರ ಸಿನೆಮಾದ ಏನಿಲ್ಲ ಏನಿಲ್ಲ ಹಾಡು ತುಂಬಾನೆ ಟ್ರೆಂಡ್ ಆಗುತ್ತಿದೆ. ಈ ಹಾಡಿನ ಕರಿಮಣಿ ಮಾಲೀಕ ನೀನಲ್ಲ ಎಂಬ ರೀಲ್ಸ್ ಅನ್ನು ಸಿನೆಮಾ ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯರೂ ಸಹ ಮಾಡುತ್ತಿದ್ದಾರೆ. ಇದೀಗ ಈ ರೀಲ್ಸ್ ಕಾರಣದಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಅಷ್ಟಕ್ಕೂ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಎಂಬ ಗ್ರಾಮದ ಕುಮಾರ್‍ ರವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಕುಮಾರ್‍ ಪತ್ನಿ ರುಪಾ ಗುಂಡಾಲ್ ಜಲಾಶಯಕ್ಕೆ ತನ್ನ ಸೋದರ ಮಾವ ಗೋವಿಂದ ಹಾಗೂ ಸಹೋಧರಿ ದೀಪಾ ಜೊತೆಗೆ ಹೋಗಿದ್ದರು. ಈ ವೇಳೆ ಅವರು ಕರಿಮಣಿ ಮಾಲೀಕ ನೀನಲ್ಲ ಎಂಬ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಮಾಡದಂತೆ ಕುಮಾರ್‍ ಪತ್ನಿಗೆ ಅನೇಕ ಬಾರಿ ಎಚ್ಚರಿಕೆ ಕೂಡ ನೀಡಿದ್ದರು. ಈ ಕಾರಣದಿಂದ ಜೋಡಿಯ ನಡುವೆ ಕೌಟುಂಬಿಕ ಕಲಹ ಸಹ ನಡೆದಿತ್ತು. ಆದರೂ ರೂಪಾ ರೀಲ್ಸ್ ಮಾಡುವುದನ್ನು ಬಿಟ್ಟಿರಲಿಲ್ಲ. ಈ ರೀಲ್ಸ್ ನೋಡಿದ ಕುಮಾರ್‍ ಸ್ನೇಹಿತರು ಆತನನ್ನು ರೇಗಿಸಿದ್ದರು. ಇದರಿಂದ ಕುಮಾರ್‍ ಮನನೊಂದಿದ್ದಾರೆ. ರೂಪಾಗೆ ಎಷ್ಟೇ ಹೇಳಿದರೂ ಕೇಳಿಲಿಲ್ಲ ಎಂದು ಕುಮಾರ್‍ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನೂ ಕುಮಾರ್‍ ಕುಟುಂಬಸ್ಥರು ರೂಪಾ, ಗೋವಿಂಧ ಹಾಗೂ ಯಶೋಧ ಎಂಬುವವರ ಮೇಲೆ ದೂರು ಕೊಟ್ಟಿದ್ದರು. ಈ ಮೂರು ಜನ ಕುಮಾರ್‍ ಸಾವಿಗೆ ಕಾರಣ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಸಹ ಕುಮಾರ್‍ ಹಾಗೂ ರೂಪಾ ನಡುವೆ ಗಲಾಟೆಯಾದಾಗ ಕುಮಾರ್‍ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಎಲ್ಲರೂ ಆತನನ್ನು ಬದುಕಿಸಿಕೊಂಡೆವು. ಇದೀಗ ರೀಲ್ಸ್ ಕಾರಣದಿಂದ ಮನನೊಂದು ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ನೀಡಿದ್ದಾರೆ.

Most Popular

To Top