ಸೌತ್ ಸಿನಿರಂಗದ ಸ್ಟಾರ್ ನಟಿ ಇಲಿಯಾನಾ ಕಡಿಮೆ ಸಮಯದಲ್ಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದ ನಟಿಯಾಗಿದ್ದಾರೆ. ದೇವದಾಸ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ತುಂಬಾ ಕ್ರೇಜ್ ಪಡೆದುಕೊಂಡರು. ಬಳಿಕ ಮಹೇಶ್ ಬಾಬು ಜೊತೆಗೆ ಪೋಕಿರಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್ ಹಿಟ್ ಹೊಡೆದ ಹಿನ್ನೆಲೆಯಲ್ಲಿ ಆಕೆ ಓವರ್ ನೈಟ್ ಸ್ಟಾರ್ ಆಗಿಬಿಟ್ಟರು. ಆದರೆ ಆಕೆಯ ಕೆಲವೊಂದು ತಪ್ಪುಗಳ ಕಾರಣದಿಂದ ಸಿನೆಮಾಗಳಿಂದ ದೂರ ಉಳಿದಿದ್ದರು. ಕೆಲವು ದಿನಗಳಿಂದ ಇಲಿಯಾನಾ ರನ್ನು ಸೌತ್ ಸಿನೆಮಾಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಸಂಬಂಧ ಕೆಲ ನಿರ್ಮಾಪಕರು ಕ್ಲಾರಿಟಿ ಕೊಟ್ಟಿದ್ದಾರಂತೆ.
ಗೋವಾ ಮೂಲದ ಹಾಟ್ ಬ್ಯೂಟಿ ಇಲಿಯಾನಾ ಓವರ್ ನೈಟ್ ಸ್ಟಾರ್ ಆಗಿ ಬಿಟ್ಟರು. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡಿದರು. ಇನ್ನೂ ತೆಲುಗು ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಬಾಲಿವುಡ್ ನಲ್ಲಿ ಸಕ್ಸಸ್ ಕಾಣಲು ಹೊರಟರು. ಆದರೆ ಆಕೆ ಬಾಲಿವುಡ್ ನಲ್ಲಿ ಸಕ್ಸಸ್ ಕಾಣಲಿಲ್ಲ. ಇದರಿಂದಾಗಿ ಆಕೆಯ ಕೆರಿಯರ್ ತುಂಬಾ ಡಲ್ ಆಗಿಬಿಟ್ಟಿತ್ತು. ಸದ್ಯ ಆಕೆಯ ಕೈಯಲ್ಲಿ ಯಾವುದೇ ಸಿನೆಮಾಗಳಲ್ಲಿಲ್ಲ. ಇನ್ನೂ ಸೌತ್ ನಲ್ಲಿ ಆಕೆಗಿಂತ ಮುಂಚೆ ಬಂದಂತಹ ಅನೇಕ ನಟಿಯರು ಸಹ ಇದೀಗ ತುಂಭಾ ಅವಕಾಶಗಳು ಪಡೆದುಕೊಂಡು ಸಾಗುತ್ತಿದ್ದಾರೆ. ಅದರಲ್ಲೂ ಕೆಲ ನಟಿಯರು ಮದುವೆಯಾದರೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡು ಸಕ್ಸಸ್ ಕಾಣುತ್ತಿದ್ದಾರೆ. ಆದರೆ ಇಲಿಯಾನಾ ಕೆರಿಯರ್ ಮಾತ್ರ ಫೇಡ್ ಔಟ್ ಆಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಆಕೆಯನ್ನು ಸೌತ್ ಸಿನೆಮಾಗಳಿಂದ ಬ್ಯಾನ್ ಮಾಡಿದ್ದಾರೆ ಎಂಬ ರೂಮರ್ ಸಹ ಕೇಳಿಬರುತ್ತಿದೆ.
ಇನ್ನೂ ಸುಮಾರು ದಿನಗಳಿಂದ ಇಲಿಯಾನಾ ರವರನ್ನು ಸೌತ್ ಸಿನೆಮಾಗಳಿಂದ ನಿರ್ಮಾಪಕರು ಬ್ಯಾನ್ ಮಾಡಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ನಟಿ ಇಲಿಯಾನಾ ಹಾಗೂ ನಿರ್ಮಾಪಕರ ನಡುವಣ ಕೆಲವೊಂದು ವಿವಾದಗಳ ಕಾರಣದಿಂದ ಆಕೆಯನ್ನು ಬ್ಯಾನ್ ಮಾಡಲಾಗಿದೆ ಎಂದು ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ. ಇಲಿಯಾನ ತಮಿಳಿನಲ್ಲಿ ದಳಪತಿ ವಿಜಯ್ ಜತೆಗೆ ನನ್ಬನ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿಎನಮಾ 2012 ರಲ್ಲಿ ತೆರೆಕಂಡಿತ್ತು. ಬಳಿಕ 2018 ರಲ್ಲಿ ಅಮರ್ ಅಕ್ಬರ್ ಆಂಥೋನಿ ಎಂಬ ತೆಲುಗು ಸಿನೆಮಾದಲ್ಲಿ ನಟಿಸಿದ್ದರು. ಬಳಿಕ ಆಕೆಯ ಯಾವುದೇ ಸಿನೆಮಾಗಳು ಬರಲಿಲ್ಲ. ಇದರಿಂದ ಆಕೆಯ ಮೇಲೆ ನಿಷೇಧವಿದೆ ಈ ಕಾರಣದಿಂದಲೇ ಆಕೆ ಸಿನೆಮಾಗಳಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿಗಳು ಹರಿದಾಡಿದವು.
ಇನ್ನೂ ಈ ಕುರಿತು ಸೌತ್ ನಿರ್ಮಾಪಕರ ಮಂಡಲಿ ರಿಯಾಕ್ಟ್ ಆಗಿದೆ ಎಂಬ ಸುದ್ದಿ ಇದೀಗ ಕೇಳಿಬರುತ್ತಿದೆ. ನಿರ್ಮಾಪಕ ಹಾಗೂ ಇಲಿಯಾನ ನಡುವೆ ಸಮಸ್ಯೆಗಳು ಉದ್ಬವಿಸಿದ್ದು ನಿಜ. ಶೂಟಿಂಗ್ ಸಮಯದಲ್ಲಿ ಇಲಿಯಾನಾ ಸೆಟ್ಸ್ ಗೆ ತಡವಾಗಿ ಬರುತ್ತಿದ್ದರು, ಜೊತೆಗೆ ನಿರ್ಲಕ್ಷ್ಯ ಸಹ ತೋರುತ್ತಿದ್ದರು. ಈ ಕಾರಣದಿಂದಲೇ ಆಕೆ ಹಾಗೂ ನಿರ್ಮಾಪಕರ ಮಧ್ಯೆ ಸಮಸ್ಯೆ ಬಂದಿತ್ತು. ಆದರೆ ಆಕೆಯನ್ನು ಬ್ಯಾನ್ ಮಾಡಿರುವುದಾಗಿ ಸುದ್ದಿಗಳು ಹರಿದಾಡುತ್ತಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನಿರ್ಮಾಕಪರು ಸ್ಪಷ್ಟನೆ ಕೊಟ್ಟಿದ್ದಾರೆ.