News

ಸನಾತನ ಧರ್ಮದ ಬಗ್ಗೆ ಅವಹೇಳನ ಮಾಡಿದ್ದ ಉದಯನಿಧಿ ತಂಗಿ ದೇವಾಲಯದಲ್ಲಿ ವಿಶೇಷ ಪೂಜೆ, ಟ್ರೋಲ್ ಆದ ಉದಯನಿಧಿ……!

ಕೆಲವು ದಿನಗಳ ಹಿಂದೆಯಷ್ಟೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನದ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಆತನ ವಿರುದ್ದ ಅನೇಕ ಹಿಂದೂಪರ ಸಂಘಟನೆಗಳು ಆಕ್ರೋಷ ಹೊರಹಾಕಿ ಕೆಲವೊಂದು ಕಡೆ ಆತನ ವಿರುದ್ದ ದೂರನ್ನು ಸಹ ಸಲ್ಲಿಸಲಾಗಿತ್ತು. ಇದೀಗ ಉದಯನಿಧಿ ಸ್ಟಾಲಿನ್ ಸಹೋದರಿ ಸೆಂತಮರೈ ಸ್ಟಾಲಿನ್ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದು, ಈ ಕಾರಣದಿಂದ ಉದಯನಿಧಿ ಸಖತ್ ಟ್ರೋಲ್ ಆಗುತ್ತಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪುತ್ರಿ ಸೆಂತಮರೈ ಸ್ಟಾಲಿನ್ ಸತೈನಾಥರ್‍ ಎಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೈಲಾಡುತುರೈ ಜಿಲ್ಲೆಯ ಸಿರ್ಕಾಜಿಯಲ್ಲಿರುವ ಸತೈನಾಥರ್‍ ದೇವಾಸ್ಥಾನದಲ್ಲಿ ಆಕೆ ಕೆಳೆದೆರಡು ದಿನಗಳ ಹಿಂದೆಯಷ್ಟೆ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದ ಬೆನ್ನಲ್ಲೆ ನೆಟ್ಟಿಗರೂ ಸಹ ವಿವಿಧ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ಸನಾತನದ ಧರ್ಮದ ವಿರುದ್ದ ಹೇಳಿಕೆ ನೀಡಿದ್ದ ಉದಯನಿಧಿ ಸಹೋದರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅದಕ್ಕೆ ಏನಂತ ಕರಿಯಬೇಕು. ಇದು ಸನಾತನ ಧರ್ಮವಲ್ಲವೇ ಎಂದು ಸಚಿವ  ಉದಯನಿಧಿಯನ್ನು ಟ್ರೋಲರ್‍ ಗಳ ಮೂಲಕ ವ್ಯಂಗ ಮಾಡಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವರ ಪುತ್ರ ಉದಯನಿಧಿ ಸ್ಟಾಲಿನ್ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಸನಾತನ ಧರ್ಮವನ್ನು ಮಲೇರಿಯಾ, ಡೆಂಗಿ, ಕೊರೋನಾ ಕಾಯಿಲೆಗಳಿಗೆ ಹೋಲಿಗೆ ಮಾಡಿದ್ದರು. ಸನಾತನ ಧರ್ಮವನ್ನು ವಿರೋಧ ಮಾಡಿದರೇ ಸಾಲದು ಅದಲ್ಲು ಸಂಪೂರ್ಣವಾಗಿ ನಾಶ ಮಾಡಬೇಕೆಂದು ಹೇಳಿದ್ದರು. ಈ ಹೇಳಿಕೆ ಇಡೀ ದೇಶದಾದ್ಯಂತ ಅನೇಕರ ಆಕ್ರೋಷಕ್ಕೆ ಕಾರಣವಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ಸಹ ಉದಯನಿಧಿಗೆ ಸರಿಯಾಗಿಯೇ ಛಿಮಾರಿ ಹಾಕಿತ್ತು. ಸನಾತನ ಧರ್ಮದ ಬಗ್ಗೆ ಅವಹೇಳನ ಮಾಡಿದ್ದ ಉದಯನಿಧಿ ಸಹೋದರಿ ಇದೀಗ ದೇವಾಲಯಕ್ಕೆ ಭೇಟಿ ನೀಡಿದ್ದು, ನೆಟ್ಟಿಗರು ಉದಯನಿಧಿಯನ್ನು ಟ್ರೋಲ್ ಗಳ ಮೂಲಕ ಸರಿಯಾಗಿ ಆಡಿಕೊಳ್ಳುತ್ತಿದ್ದಾರೆ.

Most Popular

To Top