ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ರವರು ಕೇಳವ ಕಾಲಿವುಡ್ ನಲ್ಲಿ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಭಾರಿ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ವಯಸ್ಸಾದರೂ ಸಹ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಾಮಾನ್ಯವಾಗಿ ತಾವು ಇಷ್ಟಪಡುವಂತಹ ನಟರಿಗಾಗಿ ಅನೇಕ ಸಾಮಾಜಿಕ ಕಾರ್ಯಕ್ರಮಮಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ವಿಭಿನ್ನವಾಗಿ ಅಭಿಮಾನ ಶೋ ಮಾಡುತ್ತಿರುತ್ತಾರೆ. ಇದೀಗ ಸೂಪರ್ ಸ್ಟಾರ್ ರಜಿನಿಕಾಂತ್ ರವರ ಅಭಿಮಾನಿ ಯೊಬ್ಬರು ದೇವಾಲಯವನ್ನು ನಿರ್ಮಾಣ ಮಾಡಿ ಸುದ್ದಿಯಾಗಿದ್ದಾರೆ.
ಸಿನೆಮಾ ಸೆಲೆಬ್ರೆಟಿಗಳಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿರುತ್ತಾರೆ. ಸ್ಟಾರ್ ನಟರ ಸಿನೆಮಾಗಳನ್ನು ಅನೇಕ ಬಾರಿ ನೋಡುತ್ತಿರುತ್ತಾರೆ. ಇನ್ನೂ ಇತ್ತೀಚಿಗೆ ಸುದ್ದಿಯಾಗುವ ನಿಟ್ಟಿನಲ್ಲಿ ಕೆಲ ಅಭಿಮಾನಿಗಳು ವಿವಿಧ ರೀತಿಯ ವಿಚಿತ್ರ ಕೆಲಸಗಳನ್ನು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಸೂಪರ್ ಸ್ಟಾರ್ ಅಭಿಮಾನಿಯೊಬ್ಬರು ರಜಿನಿಕಾಂತ್ ರವರಿಗೆ ದೇಗುಲ ಕಟ್ಟಿದ್ದಾರೆ. ಅಷ್ಟಕ್ಕೆ ಮಾತ್ರ ಸುಮ್ಮನಾಗದ ಅಭಿಮಾನಿ ಪ್ರತಿನಿತ್ಯ ಪೂಜೆ, ಅಭಿಷೇಕ, ಅರ್ಚನೆಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಸಹ ಹಿರೋಯಿನ್ ಗಳ ಅಭಿಮಾನಿಗಳು ದೇವಾಲಯಗಳನ್ನು ಕಟ್ಟಿಸಿದ್ದಾರೆ. ಈ ಸಂಪ್ರದಾಯ ತಮಿಳಿನಾಡಿನಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ನಯನತಾರಾ, ಖುಷ್ಬು, ಸಮಂತಾ ಸೇರಿದಂತೆ ಹಲವು ನಟಿಯರ ದೇಗುಲಗಳನ್ನು ಕಟ್ಟಿಸಿ ಪೂಜೆ, ಹಾಲಿನ ಅಭಿಷೇಕ ಮಾಡಿದ್ದನ್ನು ನೋಡಿದ್ದೇವೆ.
ಇನ್ನೂ ಇದೀಗ ಸೂಪರ್ ಸ್ಟಾರ್ ರಜಿನಿಕಾಂತ್ ರವರಿಗೂ ಸಹ ದೇಗುಲ ನಿರ್ಮಾಣ ಮಾಡಿದ್ದಾರೆ. ಈ ಹಿಂದೆಯೂ ಸಹ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ದೇವಾಲಯ ಕಟ್ಟಿದ್ದಾರೆ. ಆದರೆ ಇದೀಗ ಮತ್ತೊಬ್ಬ ಅಭಿಮಾನಿ ದೇವಾಲಯ ನಿರ್ಮಾಣ ಮಾಡಿ, ಪ್ರತಿನಿತ್ಯ ಪೂಜೆ, ಹಾರತಿ, ಅಭಿಷೇಕಗಳನ್ನು ಮಾಡುತ್ತಾ ತಮ್ಮ ಅಭಿಮಾನವನ್ನು ಸಾರಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಅಭಿಮಾನಿ ಮಧುರೈ ಮೂಲಕ ಕಾರ್ತಿಕ್ ಎಂದು ಹೇಳಲಾಗುತ್ತಿದೆ. ದೇವಾಲಯದಲ್ಲಿ 250 ಕೆಜಿ ತೂಕದ ರಜನಿಕಾಂತ್ ರವರ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದಾನೆ. ವಿಗ್ರಹದ ಕೆಳಗೆ ತನ್ನ ತಂದೆ ತಾಯಿ ಹಾಗೂ ಗಣೇಶನ ಪೊಟೋ ಇಟ್ಟಿದ್ದು, ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದಾರೆ.
ಇನ್ನೂ ರಜಿನಿಕಾಂತ್ ಕೊನೆಯದಾಗಿ ಜೈಲರ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿದ್ದು, ಸುಮಾರು 600 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಸದ್ಯ ತಲೈವರ್170 ಸಿನೆಮಾದಲ್ಲಿ ನಟಿಸಲಿದ್ದು, ಈ ಸಿನೆಮಾದಲ್ಲಿ ಬಾಲಿವುಡ್ ಸ್ಟಾರ್ ಅಮಿತಾಬ್ ಜೊತೆಗೆ ದೊಡ್ಡ ತಾರಾಬಳಗವೇ ಇರಲಿದೆ ಎಂದು ಹೇಳಲಾಗುತ್ತಿದೆ.