Film News

ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಗ್ರಾಮಕ್ಕೆ ಸಹಾಯ ಮಾಡಿದ ನಟ, ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾದ ನಟ ವಿಶಾಲ್…….!

ತಮಿಳಿನ ಸ್ಟಾರ್‍ ನಟರಲ್ಲಿ ವಿಶಾಲ್ ಸಹ ಒಬ್ಬರಾಗಿದ್ದಾರೆ ಇತ್ತೀಚಿಗೆ ಅವರು ಸದಾ ಒಂದಲ್ಲ ಒಂದು ವಿಚಾರದ ಕಾರಣದಿಂದ ಸುದ್ದಿಯ್ಲಲೇ ಇರುತ್ತಾರೆ. ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿವಾದಗಳ ಕಾರಣದಿಂದ ಸುದ್ದಿಯಾಗುತ್ತಿರುತ್ತಾರೆ. ಕೇವಲ ತಮಿಳು ಮಾತ್ರವಲ್ಲದೇ ತೆಲುಗಿನಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ವಿಶಾಲ್ ಮಾರ್ಕ್ ಆಂಟೋನಿ ಸಿನೆಮಾದ ಮೂಲಕ ಸೂಪರ್‍ ಹಿಟ್ ಪಡೆದುಕೊಂಡರು. ಇದೀಗ ಗ್ರಾಮವೊಂದಕ್ಕೆ ವಿಶಾಲ್ ದೊಡ್ಡ ಸಹಾಯ ಮಾಡಿದ್ದು, ಅನೇಕರು ವಿಶಾಲ್ ರವರನ್ನು ಹೊಗಳುತ್ತಿದ್ದಾರೆ.

ಸ್ಟಾರ್‍ ನಟ ವಿಶಾಲ್ ಇತ್ತೀಚಿಗೆ ತೆರೆಕಂಡ ಮಾರ್ಕ್ ಆಂಟೋನಿ ಸಿನೆಮಾ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಟೈಂ ಟ್ರಾವೆಲ್ ಕಥೆಯುಳ್ಳ ಈ ಸಿನೆಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ತೆಲುಗು ಹಾಗೂ ತಮಿಳು ಎರಡೂ ಸಿನಿರಂಗದಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡ ವಿಶಾಲ್ ರವರು ನಡಿಗರ್‍ ಎಂಬ ಸಂಘದ ಪ್ರಧಾನ ಕಾರ್ಯದರ್ಶಿ ಸಹ ಆಗಿದ್ದಾರೆ. ಸಿನೆಮಾಗಳ ಜೊತೆಗೆ ಆಗಾಗ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಗ್ರಾಮವೊಂದಕ್ಕೆ ವಿಶಾಲ್ ಸಹಾಯಹಸ್ತ  ಚಾಚಿದ್ದಾರೆ. ಒಂದು ಗ್ರಾಮಕ್ಕೆ ನೀರಿನ ಸಮಸ್ಯೆಯಿಲ್ಲದಂತೆ ಮಾಡಿದ್ದಾರೆ. ಸದ್ಯ ಹರಿ ಎಂಬ ನಿರ್ದೇಶನದಲ್ಲಿ ಶಿವ ಸಿನೆಮಾ ಮಾಡುತ್ತಿದ್ದಾರೆ. ಊತೂತ್ತುಕುಡಿ, ಊಶಿಮೇಸಿಯಾಪುರಂ ಹಾಗೂ ಕುಮಾರಚಕ್ಕಣಪುರಂ ಗ್ರಾಮಗಳಲ್ಲಿ ಈ ಸಿನೆಮಾದ ಶೂಟಿಂಗ್ ನಡೆಯುತ್ತಿದೆ.

ಶೂಟಿಂಗ್ ಗೆ ಹೋದ ಕುಮಾರಚಕ್ಕಣಪುರಂ ಎಂಬ ಗ್ರಾಮದಲ್ಲಿ ನೀರಿನ ಸಮಸ್ಯೆಯಿದೆ ಎಂಬ ಬಗ್ಗೆ ವಿಶಾಲ್ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಸ್ಪಂಧಿಸಿದ ವಿಶಾಲ್ ತನ್ನ ಸ್ವಂತ ಖರ್ಚಿನಿಂದ ಬೋರ್‍ ವೆಲ್ ಕೊರೆಸಿದ್ದಾರೆ. ಅದರ ಜೊತೆಗೆ 5 ಸಾವಿರ ಲೀಟರ್‍ ಸಾಮರ್ಥ್ಯವಿರುವ ಸಿಂಥಟಿಕ್ ವಾಟರ್‍ ಟ್ಯಾಂಕ್ ಸಹ ವ್ಯವಸ್ಥೆ ಮಾಡಿದ್ದಾರೆ. ಗ್ರಾಮಸ್ಥರು ನೀರನ್ನು ಉಪಯೋಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೊಳಾಯಿಗಳನ್ನು ಸಹ ಹಾಕಿಸಿದ್ದಾರೆ. ಸುಮಾರು ವರ್ಷಗಳಿಂದ ಈ ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ವಿಶಾಲ್ ಬಗೆಹರಿಸಿದ್ದಾರೆ. ಇನ್ನೂ ತಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸಿದಂತಹ ವಿಶಾಲ್ ರವರಿಗೆ ಸಾಯುವವರೆಗೂ ನೆನಪಿಸಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top