ನಾಲ್ವರು ಕಾಲಿವುಡ್ ನ ನಾಲ್ವರು ಸ್ಟಾರ್ ನಟರಿಗೆ ನಿರ್ಮಾಪಕರ ಮಂಡಳಿ ರೆಡ್ ಕಾರ್ಡ್ ಜಾರಿ ಮಾಡಲು ನಿರ್ಣಯ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ತಮಿಳಿನ ಸ್ಟಾರ್ ನಟರಾದ ಧನುಷ್, ವಿಶಾಲ್, ಶಿಂಬು ಹಾಗೂ ಅಥರ್ವ ಮುರಳಿ ರವರಿಗೆ ರೆಡ್ ಕಾರ್ಡ್ ನೀಡಲು ತೀರ್ಮಾನಿಸಿದಂತೆ. ಸರ್ವ ಸದಸ್ಯರ ಸಭೆಯಲ್ಲಿ ನಿರ್ಮಾಪಕರ ಮಂಡಳಿ ಈ ನಿರ್ಣಯ ತೆಗೆದುಕೊಂಡಿದ್ದು, ಈ ಸುದ್ದಿ ಇದೀಗ ಸಂಚಲನ ಸೃಷ್ಟಿಸಿದೆ ಎನ್ನಲಾಗಿದೆ.
ಈ ಹಿಂದೆ ವಿಶಾಲ್ ನಿರ್ಮಾಪಕರ ಮಂಡಳಿಯ ಅಧ್ಯಕ್ಷರಾಗಿದ್ದಾಗ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ವಿಶಾಲ್ ಗೆ ರೆಡ್ ಕಾರ್ಡ್ ಜಾರಿ ಮಾಡಲಿದ್ದಾರಂತೆ. ವಿಶಾಲ್ ಮೇಲೆ ಸಿನಿರಂಗದಲ್ಲಿ ಸುಮಾರು ದಿನಗಳಿಂದ ವಿವಾದಗಳು ನಡೆಯುತ್ತಿದೆ. ಜೊತೆಗೆ ವಿಶಾಲ್ ಸಹ ಇತ್ತೀಚಿಗೆ ಕೆಲವೊಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಇನ್ನೂ ವಿಶಾಲ್ ಗೆ ರೆಡ್ ಕಾರ್ಡ್ ನೀಡಿದರೇ ಅವರ ಸಿನೆಮಾಗಳ ಮೇಲೆ ಸಹ ಪ್ರಭಾವ ಬೀರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನೂ ನಟ ಶಿಂಬು ಹಾಗೂ ನಿರ್ಮಾಪಕ ಮೈಖಲ್ ರಾಯಪ್ಪನ್ ಮದ್ಯೆ 2021ರಲ್ಲೆ ವಿವಾದ ಸೃಷ್ಟಿಯಾಗಿತ್ತು. ಸಿನೆಮಾ ಒಂದಕ್ಕೆ 60 ದಿನ ಡೇಟ್ಸ್ ನೀಡಿ ಕೇವಲ 27 ದಿನಗಳು ಮಾತ್ರ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಅದರಿಂದ ತಾನು ನಷ್ಟ ಹೋಗಿದ್ದಾನೆ ಎಂದು ನಿರ್ಮಾಪಕ ಮೈಖರ್ ಎರಡು ವರ್ಷಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ಕಾರಣದಿಂದ ನಟ ಶಿಂಬು ರವರಿಗೆ ರೆಡ್ ಕಾರ್ಡ್ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ತಮಿಳು ಸ್ಟಾರ್ ನಟ ಧನುಷ್ ರವರಿಗೂ ಸಹ ರೆಡ್ ಕಾರ್ಡ್ ಜಾರಿ ಮಾಡಿರುವುದು ಹಾಟ್ ಟಾಪಿಕ್ ಆಗಿದೆ. ಈ ಹಿಂದೆ ಧನುಷ್ ತೆನಂಡಾಲ್ ಎಂಬ ನಿರ್ಮಾಣ ಸಂಸ್ಥೆಯ ಸಿನೆಮಾ ಒಂದನ್ನು ಒಪ್ಪಿಕೊಂಡಿದ್ದರು. ಆದರೆ ಶೂಟಿಂಗ್ ಪೂರ್ಣಗೊಳಿಸುವುದಕ್ಕು ಮುಂಚೆ ಆತ ಸಿನೆಮಾ ಬಿಟ್ಟಿದ್ದಾರೆ ಎಂಬುದು ನಿರ್ಮಾಪಕ ಮಂಡಳಿಗೆ ದೂರು ಬಂದಿತ್ತು. ಈ ಕಾರಣದಿಂದ ಧನುಷ್ ಗೂ ಸಹ ರೆಡ್ ಕಾರ್ಡ್ ಜಾರಿ ಮಾಡಲಿದ್ದಾರೆ ಎಂಬುದು ಕಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ.
ಅದೇ ಮಾದರಿಯಲ್ಲಿ ಕಾಲಿವುಡ್ ನಟ ಅಥರ್ವ ಮುರಳಿ ಗೂ ಸಹ ರೆಡ್ ಕಾರ್ಡ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಹಿಂದೆ ಸಹ ಕೆಲವರು ದೊಡ್ಡ ನಟರ ವಿರುದ್ದ ರೆಡ್ ಕಾರ್ಡ್ ಜಾರಿ ಮಾಡಲಾಗಿತ್ತು. ಅದರಿಂದ ವರ್ಷದ ಮಟ್ಟಿಗೆ ಅವರು ಸಿನೆಮಾಗಳಿಂದ ದೂರ ಉಳಿಯಬೇಕಾಗಿತ್ತು. ಇದೀಗ ನಾಲ್ವರು ಸ್ಟಾರ್ ನಟರಿಗೆ ರೆಡ್ ಕಾರ್ಡ್ ನೀಡಿದ್ದು, ಕಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ ಜೊತೆಗೆ ಆ ಸ್ಟಾರ್ ಗಳ ಅಭಿಮಾನಿಗಳು ನಿರ್ಮಾಪಕರ ವಿರುದ್ದ ಫೈರ್ ಆಗುತ್ತಿದ್ದಾರೆ. ಈ ಬಗ್ಗೆ ಏನಾಗುತ್ತದೆ, ಎಲ್ಲಿಯವರೆಗೂ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.