Film News

ಉಮೈರ್ ಸಂಧುಗೆ ಲೆಫ್ಟ್ ಲೆಗ್ ಚಪ್ಪಲಿಯಲ್ಲಿ ಹೊಡೆದಂತೆ ಕೌಂಟರ್ ಕೊಟ್ಟ ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ….!

ಸೌತ್ ಸಿನೆಮಾ ಸ್ಟಾರ್‍ ಗಳ ಬಗ್ಗೆ ಸೆನ್ಸಾರ್‍ ಬೋರ್ಡ್ ಸದಸ್ಯನೆಂದು, ಕ್ರಿಟಿಕ್ ಎಂದು ಹೇಳಿಕೊಳ್ಳುವ ಉಮೈರ್‍ ಸಂಧು ವಿವಿಧ ರೀತಿಯ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಿರುತ್ತಾರೆ. ಅಂತಹ ಟ್ವೀಟ್ ಗಳ ಮೂಲಕ ಪಾಪ್ಯುಲಾರಿಟಿಯನ್ನು ಪಡೆದುಕೊಳ್ಳಲು ಯತ್ನ ಮಾಡುತ್ತಿರುತ್ತಾರೆ. ಪವನ್ ಕಲ್ಯಾಣ್, ಸಮಂತಾ, ನಾಗಚೈತನ್ಯ, ಪ್ರಭಾಸ್, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸೌತ್ ಸ್ಟಾರ್‍ ಗಳ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವ ಟ್ವೀಟ್ ಮಾಡುತ್ತಿರುತ್ತಾರೆ. ಇದೀಗ ಆತನಿಗೆ ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಕೊಂಚ ಸ್ಟ್ರಾಂಗ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ಕೆಜಿಎಫ್ ಸಿರೀಸ್ ಮೂಲಕ ಫೇಂ ಪಡೆದುಕೊಂಡ ಶ್ರೀನಿಧಿ ಶೆಟ್ಟಿ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಖ್ಯಾತಿಯನ್ನು ಪಡೆದುಕೊಂಡರು. ಈ ಸಿನೆಮಾದಿಂದಲೇ ಆಕೆ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಈ ಸಿನೆಮಾದಲ್ಲಿ ಶ್ರೀನಿಧಿ ಅಷ್ಟೊಂದು ಗ್ಲಾಮರ್‍ ಶೋ ಮಾಡಿರಲಿಲ್ಲ. ಕೆಲವೊಂದು ದೃಶ್ಯಗಳಲ್ಲಿ ಮಾತ್ರ ಮಾಡ್ರನ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಈ ಸಿನೆಮಾದಲ್ಲಿ ಯಶ್ ಹಾಗೂ ಶ್ರೀನಿಧಿ ನಡುವಣ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಕೆಲವೊಂದು ದೃಶ್ಯಗಳಲ್ಲಿ ಶ್ರೀನಿಧಿ ಎಮೋಷನಲ್ ಆಗಿ ನಟಿಸಿದ್ದು ಶ್ರೀನಿಧಿ ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡರು. ಇನ್ನೂ ಈ ಸಿನೆಮಾದ ಸಕ್ಸಸ್ ಅನ್ನು ಕಂಡುಕೊಳ್ಳಲು ಶ್ರೀನಿಧಿ ಫೈಲ್ ಆದರು ಎಂದೂ ಸಹ ಹೇಳಬಹುದಾಗಿದೆ. ಕೆಜಿಎಫ್ ಸಿನೆಮಾದ ಬಳಿಕ ಆಕೆ ಕೋಬ್ರಾ ಸಿನೆಮಾದಲ್ಲಿ ಮಾತ್ರ ನಟಿಸಿದ್ದರು. ಇದೀಗ ಆಕೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವಂತಹವರು ಹೆಚ್ಚಾಗುತ್ತಿದ್ದಾರೆ. ಈ ಹಾದಿಯಲ್ಲೇ ಫಿಲಂ ಕ್ರಿಟಿಕ್ ಎಂದು ಹೇಳಿಕೊಳ್ಳುವಂತಹ ಉಮೈರ್‍ ಸಂಧು ಎಂಬಾತ ಸದಾ ಫೇಕ್ ಟ್ವೀಟ್ ಗಳ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಕೆಜಿಎಫ್ ನಟ ಯಶ್ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಕೆಜಿಎಫ್ ಶೂಟಿಂಗ್ ನಲ್ಲಿ ಯಶ್ ಅನೇಕ ಬಾರಿ ಶ್ರೀನಿಧಿಗೆ ಕಿರುಕುಳ ಕೊಟ್ಟಿದ್ದರು. ಆಕೆಗೆ ಸಮಸ್ಯೆ ಕೊಡುತ್ತಿದ್ದರು. ಈ ಕಾರಣದಿಂದ ಯಶ್ ಜೊತೆಗೆ ಶ್ರೀನಿಧಿ ನಟಿಸದೇ ಇರಲು ನಿರ್ಣಯ ತೆಗೆದುಕೊಂಡಿದ್ದಾರೆ ಎಂಬ ರೂಮರ್‍ ಹರಿಬಿಟ್ಟರು. ಸದ್ಯ ಉಮೈರ್‍ ಸಂಧು ನೀಡಿ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನೂ ಈ ಪ್ರಚಾರ ವೈರಲ್ ಆಗುತ್ತಿದ್ದಂತೆ ಶ್ರೀನಿಧಿ ಎಂಟ್ರಿಕೊಟ್ಟಿದ್ದಾರೆ.

ತನ್ನ ಬಗ್ಗೆ ಹರಿದಾಡುತ್ತಿರುವ ರೂಮರ್‍ ಗೆ ಸೋ ಕಾಲ್ಡ್ ಕ್ರಿಟಿಕ್ ಗೆ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ. ಸೋಷಿಯಲ್ ಮಿಡಿಯಾ ಎಲ್ಲರಿಗೂ ಸುಲಭ ರೀತಿಯಲ್ಲಿ ಸಿಗುತ್ತದೆ. ಆದರೆ ಯಾರು ಹೇಗೆ ಬಳಸುತ್ತಿದ್ದಾರೆ ಎಂಬುದು ಮಾತ್ರ ಮುಖ್ಯ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಅನೇಕರು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳು ಬಳಸುತ್ತಿದ್ದಾರೆ. ಪ್ರೀತಿಯನ್ನು, ಸಂತೋಷವನ್ನು ಹಂಚಿಕೊಳ್ಳಲು ಸೋಷಿಯಲ್ ಮಿಡಿಯಾವನ್ನು ಸರಿಯಾಗಿ ಬಳಿಸಿಕೊಳ್ಳಿ. ಮತ್ತೊಮ್ಮೆ ಹೇಳುತ್ತಿದ್ದೇನೆ ನನಗೆ ರಾಕಿಂಗ್ ಸ್ಟಾರ್‍ ಯಶ್ ಜೊತೆ ನಟಿಸುವುದು ನನ್ನ ಅದೃಷ್ಟ. ಕೆಜಿಎಫ್ ಪ್ರಪಂಚದಲ್ಲಿ ಭಾಗವಾಗಿದ್ದಕ್ಕೆ ನಾನು ಗರ್ವಿಸುತ್ತಿದ್ದೇನೆ. ರಾಕಿಂಗ್ ಸ್ಟಾರ್‍ ಓರ್ವ ಜೆಂಟಲ್ ಮ್ಯಾನ್, ನನ್ನ ಗುರು, ನನ್ನ ಸ್ನೇಹಿತ ಎಂದು ಪ್ರಶಂಸೆ ಮಾಡಿದ್ದಾರೆ. ಈ ಮೂಲಕ ಉಮೈರ್‍ ಸಂಧುಗೆ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ.

Most Popular

To Top