News

ರಾಮನನ್ನು ಬಿಜೆಪಿಯವರು ಬೀದಿ ಬೀದಿಯಲ್ಲಿ ಆಟ ಆಡಿಸಿದ್ದಾರೆ ಎಂದು ವ್ಯಂಗವಾಡಿದ ಸಚಿವ ಮಧು ಬಂಗಾರಪ್ಪ….!

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೇಸ್ ನಡುವೆ ಪರ-ವಿರೋಧ ಚರ್ಚೆಗಳು, ಕಾಮೆಂಟ್ ಗಳು ಬರುತ್ತಲೇ ಇದೆ. ಕಾಂಗ್ರೇಸ್ ನಾಯಕರು ತಮ್ಮದೇ ಆದ ಶೈಲಿಯಲ್ಲಿ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದಾರೆ. ಇದೀಗ ಸಚಿವ ಮಧು ಬಂಗಾರಪ್ಪ ಬಿಜೆಪಿಯವರು ರಾಮನನ್ನು ಬೀದಿ ಬೀದಿಯಲ್ಲಿ ಆಟ ಆಡಿಸಿದ್ದಾರೆ ಎಂದು ವ್ಯಂಗವಾಡಿದ್ದಾರೆ.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಜ.22 ರಂದು ರಾಮಮಂದಿರ ಉದ್ಘಾಟನೆಯಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ರಾಮ ನಮ್ಮ ನಿಮ್ಮ ಹೃದಯದಲ್ಲಿದ್ದಾನೆ. ಬಿಜೆಪಿಗೆ ರಾಮನ ಶಾಪ ಪಕ್ಕಾ ತಟ್ಟುತ್ತೆ. ನಮ್ಮ ಹಣೆಬರಹದಲ್ಲಿ ಯಾವಾಗ ಅಯೋಧ್ಯೆಗೆ ಹೋಗಬೇಕು ಎಂದು ಬರೆದಿರುತ್ತದೆಯೋ ಅದೇ ದಿನ ಹೋಗಿ ರಾಮನ ದರ್ಶನ ಮಾಡುತ್ತೇವೆ. ಅಯೋಧ್ಯೆಗೆ ಹೋಗದ ಬಿಜೆಪಿಯವರು ರಾಮದ್ರೋಹಿಗಳೇ, ದೇಶದ ದೊಡ್ಡ ದೊಡ್ಡ ಗಣ್ಯವ್ಯಕ್ತಿಗಳನ್ನು ಬ್ಯಾರಿಕೇಡ್ ಬಳಿ ನಿಲ್ಲಿಸಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ಕಂಡ ಅವರು ಕೈ ಮುಗಿದು ನಮಃ ಶಿವಾಯ ಎಂದು ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ಟೀಕೆ ಮಾಡಿದ್ದಾರೆ.

ಬಳಿಕ ಭಾರತ್ ಜೋಡೋ ಯಾತ್ರೆಯ ಬಗ್ಗೆ ಸಹ ಮಧು ಬಂಗಾರಪ್ಪ ರಿಯಾಕ್ಟ್ ಆಗಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಅಡ್ಡಿಪಡಿಸಿರುವುದು ಸರಿಯಲ್ಲ. ಬಿಜೆಪಿಯವರಯ ಕಿತಾಪತಿ ಮಾಡೋದ್ರಲ್ಲಿ ನಂಬರ್‍ ಒನ್. ಒಳ್ಳೆಯದು ನಡೆದಿದೆ ಎಂದರೇ ಈ ರೀತಿ ಮಾಡೋದು ಬಿಜೆಪಿ ಹೊಸದೇನಲ್ಲ. ಗಾಂಧಿ ಕುಟುಂಬ ತ್ಯಾಗ ಬಲಿದಾನ ಮಾಡಿದೆ. ಇದೀಗ ರಾಹುಲ್ ಗಾಂಧಿ ಯಾತ್ರೆ ಮೇಲೆ ಕಲ್ಲು ತೂರಾಟ ಮಾಡಿರುವುದು ಬಿಜೆಪಿಯವರ ಕೆಟ್ಟ ಬುದ್ದಿಗೆ ಒಳ್ಳೆಯ ಉದಾಹರಣೆಯಾಗಿದೆ. ನಿಜವಾದ ಹಿಂದೂಗಳು, ತಾವು ಹಿಂದೂ ಎಂದು ಹೇಳಿಕೊಳ್ಳುವ ಅವಶ್ಯಕತೆಯಿಲ್ಲ. ಅದು ನಮ್ಮ ರಕ್ತ ಹಾಗೂ ಮಾತಿನಲ್ಲಿದೆ. ಧರ್ಮದ ಹೆಸರಿನ ರಾಜಕಾರಣ ತುಂಬಾನೆ ಕೆಟ್ಟದ್ದು. ಅಂಬೇಡ್ಕರ್‍ ರವರ ಸಂವಿಧಾನ ನಮ್ಮ ದೇವರು. ಪಕ್ಷಕ್ಕಾಗಲಿ ಅಥವಾ ಮನೆತನಕ್ಕಾಗಲಿ ದೇವರನ್ನು ಅಡ ಇಡಬಾರದು. ನೀವು ರಾಮನ ಭಕ್ತರು ಎಂದರೇ ಉಳಿದವರು ವಿರೋಧಿಗಳೇ, ನಾವು ಎಲ್ಲಾ ಧರ್ಮ, ಎಲ್ಲಾ ದೇವರ ಭಕ್ತರಾಗಿದ್ದೇವೆ ಎಂದು ಬಿಜೆಪಿಯವರಿಗೆ ಟಾಂಗ್ ಕೊಟ್ಟಿದ್ದಾರೆ.

Most Popular

To Top