News

ಬಿಜೆಪಿಯಿಂದ ರಾಜ್ಯ ಸಭೆಗೆ ನಾಮ ನಿರ್ದೇಶನಗೊಂಡ ಇನ್ಪೋಸಿಸ್ ಫೌಂಡೇಷನ್ ಮಾಜಿ ಅಧ್ಯಕ್ಷೆ ಸುಧಾಮೂರ್ತಿ….!

ಸಮಾಜ ಸೇವಕಿ ಹಾಗೂ ಇನ್ಫೋಸಿಸ್ ಫೌಂಡೇಷನ್ ನ ಮಾಜಿ ಅಧ್ಯಕ್ಷೆ ಸುಧಾಮೂರ್ತಿರವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಬಿಜೆಪಿ ಪಕ್ಷದಿಂದ ಸುಧಾಮೂರ್ತಿಯವರನ್ನು ನಾಮ ನಿರ್ದೇಶನ ಮಾಡಿದ್ದು, ರಾಜಕೀಯ ಗಣ್ಯರು, ಅಭಿಮಾನಿಗಳು ಸೇರಿದಂತೆ ಅನೇಕರಿಂದ ಅವರಿಗೆ ಶುಭಾಷಯಗಳು ಹರಿದುಬರುತ್ತಿವೆ.

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸುಧಾಮೂರ್ತಿರವರಿಗೆ ಅಭಿನಂದನೆಗಳು, ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಈ ಕುರಿತು ಟ್ವೀಟ್ ಮಾಡಿದ್ದಾರೆ. ಭಾರತದ ರಾಷ್ಟ್ರಪತಿಗಳು ಸುಧಾಮೂರ್ತಿರವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಖುಷಿಯ ವಿಚಾರವಾಗಿದೆ. ಲೋಕೋಪಕಾರ, ಶಿಕ್ಷಣ ಹಾಗೂ ಸಮಾಜಸೇವೆ ಸೇರಿದಂತೆ ವಿವಿಧ  ಕ್ಷೇತ್ರಗಳಿಗೆ ಸುಧಾ ಜೀಯವರ ಸೇವೆ ಅಪಾರ ಹಾಗೂ ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿ ನಮ್ಮ ನಾರಿ ಶಕ್ತಿಗೆ ಪ್ರಬಲವಾದ ಸಾಕ್ಷಿಯಾಗಿದೆ. ಇದು ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ. ಅವರ ರಾಜ್ಯ ಸಭಾ ಸದಸ್ಯ ಅವಧಿ ಪ್ರಲಪ್ರಧವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

ಇನ್ನೂ ಈ ಕುರಿತು ಸುಧಾ ಮೂರ್ತಿಯವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ನನ್ನಿಂದ ಏನಾದರೂ ದೇಶಕ್ಕೆ ಸಹಾಯವಾಗಲಿ ಎಂದು ಬಯಸುತ್ತೇನೆ ಅಷ್ಟೆ. ಸದ್ಯ ನಾನು ವಿದೇಶದಲ್ಲಿದ್ದೇನೆ. ಈ ಬಗ್ಗೆ ನಾನು ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಕುಟುಂಬದಲ್ಲಿ ಯಾರಿಗೂ ಸಹ ಈ ಸುದ್ದಿ ತಿಳಿದಿಲ್ಲ. ಮಾದ್ಯಮಗಳಿಂದ ಅವರಿಗೆ ಈ ಸುದ್ದಿ ತಿಳಿಯುವುದಕ್ಕೂ ಮುಂಚೆ ನಾನು ಅವರಿಗೆ ತಿಳಿಸಬೇಕಿದೆ. ಮೋದಿಯವರ ಟ್ವೀಟ್ ನೋಡಿದ ಬಳಿಕ ನನಗೆ ಸುದ್ದಿ ತಿಳಿಯಿತು. ಅವರಿಗೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ. ನನ್ನ ಕೈಯಲ್ಲಿ ಆದಷ್ಟು ಚೆನ್ನಾಗಿ ಕೆಲಸ ಮಾಡುತ್ತೇನೆ. ರಾಜಕೀಯಕ್ಕೆ ಬರುವ ನಿರೀಕ್ಷೆಯನ್ನು ನಾನು ಯಾವತ್ತೂ ಹೊಂದಿರಲಿಲ್ಲ ಎಂದು ರಿಯಾಕ್ಟ್ ಆಗಿದ್ದಾರೆ. ಇನ್ನೂ ಸುಧಾ ಮೂರ್ತಿಯವರಿಗೆ ಪಕ್ಷಾತೀತವಾಗಿ ಶುಭಾಷಯಗಳು ಹಾಗೂ ಅಭಿನಂದನೆಗಳು ಹರಿದುಬರುತ್ತಿವೆ.

Most Popular

To Top