Film News

ಜಗ್ಗೇಶ್ ನೀಡಿದ ಹುಲಿ ಉಗುರು ಮಾತಿಗೆ ವರ್ತೂರ್ ಸಂತೋಷ್ ರಿಯಾಕ್ಷನ್, ಕಾಲಾಯ ತಸ್ಮೈ ನಮಃ ಎಂದ ವರ್ತೂರ್…..!

ರಂಗನಾಯಕ ಸಿನೆಮಾದ ಪತ್ರಿಕಾಗೋಷ್ಟಿಯಲ್ಲಿ ನವರಸ ನಾಯಕ ಜಗ್ಗೇಶ್ ಹುಲಿ ಉಗುರು ಬಗ್ಗೆ ಮಾತನಾಡುತ್ತಾ ನೀಡಿದ ಕೆಲವೊಂದು ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಅವನು ಯಾರೋ ಕಿತ್ತೋದ್ ನನ್ ಮಗ ಟಿವಿಯಲ್ಲಿ ತಗಲ್ಕೊಂಡ ಎಂದು ಕಾಮೆಂಟ್ ಮಾಡಿದ್ದು, ಈ ರೀತಿಯಲ್ಲಿ ಜಗ್ಗೇಶ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಚರ್ಚೆಯಾಗುತ್ತಿದ್ದು, ಇದೀಗ ವರ್ತೂರ್‍ ಸಂತೋಷ್ ಈ ಕುರಿತು ರಿಯಾಕ್ಷನ್ ಕೊಟ್ಟಿದ್ದು, ಅವರ ರಿಯಾಕ್ಷನ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನವರಸ ನಾಯಕ ಜಗ್ಗೇಶ್ ರವರು ರಂಗನಾಯಕ ಸಿನೆಮಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಹುಲಿ ಉಗುರು ಪ್ರಕರಣದ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು. ಈ ವೇಳೆ ಮಾತನಾಡಿದ ಜಗ್ಗೇಶ್ ನಾನು ಹುಲಿ ತರ ಬದುಕಬೇಕು ಎಂದು ನಮ್ಮ ತಾಯಿ ಹುಲಿ ಉಗುರಿನ ಪೆಂಡೆಂಟ್ ಕೊಟ್ಟಿದ್ದರು. ಆದರೆ ಅವನು ಯಾವಾನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿ ಶೋಗೆ ಹೋಗಿ ತಗಲಾಕ್ಕೊಂಡ ಎಂದಿದ್ದರು. ನನ್ನ ಮನೆಯ ಮೇಲೆ ಅರಣ್ಯಾಧಿಕಾರಿಗಳು ಧಾಳಿ ನಡೆಸಿ ಹುಲಿ ಉಗುರು ವಶಪಡಿಸಿಕೊಂಡಿದ್ದರು. ಈ ಕುರಿತು ಜಗ್ಗೇಶ್ ಕಾರ್ಯಕ್ರಮದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈ ಕುರಿತು ಬಿಗ್ ಬಾಸ್ ಸ್ಪರ್ಧಿ ವರ್ತೂರ್‍ ಸಂತೋಷ್ ರಿಯಾಕ್ಟ್ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 10 ಕನ್ನಡದ ಮೂಲಕ ಫೇಂ ಪಡೆದುಕೊಂಡ ವರ್ತೂರ್‍ ಸಂತೋಷ್ ಜಗ್ಗೇಶ್ ನೀಡಿದ ಹೇಳಿಕೆ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಬಿಡಣ್ಣ ಅವರು ದೊಡ್ಡವರು, ಕಾಲಾಯ ತಸ್ಮೈ ನಮಃ ಅಷ್ಟೆ, ಕೆಲವೊಂದಕ್ಕೆ ಉತ್ತರ ಕೊಡಬೇಕು, ಕೆಲವೊಂದು ಮಾತುಗಳಿಗೆ ಸೈಲೆಂಟ್ ಆಗಿರಬೇಕು. ಅಷ್ಟು ಸಾಕು ಉತ್ತರ ಸಿಕ್ಕಿಬಿಡುತ್ತದೆ ಎಂದು ವರ್ತೂರ್‍ ಸಂತೊಷ್ ಹೇಳಿದ್ದಾರೆ. ಅಷ್ಟೇ ಅಲ್ಲ ನಾನು ಸುದೀಪ್ ಅಣ್ಣ ರವರ ಹತ್ರ ಕೆಲವೊಂದು ಕಲಿತಿದ್ದೇನೆ. ಸುದೀಪ್ ಅಣ್ಣ ಒಂದು ಮಾತು ಹೇಳ್ತಾರೆ, ವರ್ತೂರ್‍ ಅವ್ರೆ ಎಲ್ಲಾ ಟೈಮ್ ನಲ್ಲೂ ಮಾತನಾಡಬೇಕು ಅಂತ ಏನಿಲ್ಲ. ಕೆಲವು ಸಲ ಮಾತನಾಡದೇ ಸುಮ್ಮನಿದ್ರೆ ಸಾಕು ಆ ಮೌನವೇ ಉತ್ತರ ನೀಡುತ್ತದೆ ಎಂದು ಸುದೀಪ್ ರವರ ಸಲಹೆಗಳನ್ನು ನೆನಪಿಸಿಕೊಂಡಿದ್ದಾರೆ.

Most Popular

To Top