Film News

ನೆಗೆಟೀವ್-ಪಾಸಿಟೀವ್ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಗಜಪಡೆ ಪೋಸ್ಟ್ ಬಗ್ಗೆ ಪರೋಕ್ಷವಾಗಿ ಹೇಳಿಕೆ ಕೊಟ್ಟ ಅಶ್ವಿನಿ….!

ಕಳೆದೆರಡು ದಿನಗಳಿಂದ RCB ಸೋಲಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್‍ ರವರೇ ಕಾರಣ ಎಂಬ ಸೋಷಿಯಲ್ ಮಿಡಿಯಾ ಪೋಸ್ಟ್ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅಪ್ಪು ಹುಡುಗರು ಪೊಲೀಸರಿಗೆ ದೂರು ನೀಡಿದ್ದು, ಪೋಸ್ಟ್ ಮಾಡಿದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದೀಗ ಪರೋಕ್ಷವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್‍ ಈ ಕುರಿತು ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ಗಜಪಡೆ ಎಂಬ ಹೆಸರಿನ ಟ್ವಿಟರ್‍ ಖಾತೆಯ ಮೂಲಕ RCB ಸೋಲಲು ಅಶ್ವಿನಿ ಪುನೀತ್ ರಾಜ್ ಕುಮಾರ್‍ ರವರೇ ಕಾರಣ ಎಂದು ತುಂಬಾ ಕೀಳು ಮಟ್ಟದ ಪದ ಬಳಕೆ ಮಾಡಿ ಪೋಸ್ಟ್ ಒಂದನ್ನು ಮಾಡಿದ್ದ. ದರ್ಶನ್ ಅಭಿಮಾನಿ ಎನ್ನಲಾದ ವ್ಯಕ್ತಿ ಈ ಖಾತೆಯ ಮೂಲಕ ಆ ಪೋಸ್ಟ್ ಮಾಡಿದ್ದ ಎನ್ನಲಾಗುತ್ತಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದುಬರಬೇಕಿದೆ. ಅಷ್ಟೇಅಲ್ಲದೇ ಗಜಪಡೆ ಹಂಚಿಕೊಂಡ ಪೋಸ್ಟ್ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಆಕ್ರೋಷ ಹೆಚ್ಚಾಗುತ್ತಿದ್ದಂತೆ ಆ ಪೇಜ್ ಹೆಸರನ್ನು ಬದಲಿಸಿ ಸುದೀಪ್ ಅಭಿಮಾನಿ ಎಂದು ಬದಲಿಸಿದ್ದ. ಅಪ್ಪು ಹುಡುಗರು ಕೂಡಲೇ ಈ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಕೂಡಲೇ ಬಂಧನ ಮಾಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇದೀಗ ಕಾರ್ಯಕ್ರಮವೊಂದರಲ್ಲಿ ಅಶ್ವಿನಿ ಈ ಕುರಿತು ಪರೋಕ್ಷವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಪುನೀತ್ ರಾಜ್ ಕುಮಾರ್‍ ನಿಧನದ ಬಳಿಕ ಪಿ.ಆರ್‍.ಕೆ ಸ್ಟುಡಿಯೋ ಜವಾಬ್ದಾರಿಯನ್ನು ಅಶ್ವಿನಿ ವಹಿಸಿಕೊಂಡಿದ್ದಾರೆ. ಹೊಸ ಸಿನೆಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಪಿ.ಆರ್‍.ಕೆ. ಸ್ಟುಡಿಯೋದಲ್ಲಿ O2 ಎಂಬ ಸಿನೆಮಾ ಮಾಡಿದ್ದು, ಈ ಸಿನೆಮಾದ ಸುದ್ದಿಗೋಷ್ಟಿಯನ್ನು ಬೆಂಗಳೂರಿನ ಸದಾಶಿವನರಗದಲ್ಲಿರುವ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಪಾಸಿಟೀವ್ ಮತ್ತು ನೆಗಟೀವ್ ಮಾತುಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅಶ್ವಿನಿ ನೇರವಾಗಿ ಉತ್ತರಿಸಿದ್ದಾರೆ. ಬೇರೆ ಆಯ್ಕೆ ಇಲ್ಲ, ಜೀವನ ಸಾಗಲೇಬೇಕು ಎರಡನ್ನೂ ಸಮನಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ. ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಕಳೆದೆರಡು ದಿನಗಳಿಂದ ಚರ್ಚೆಯಾಗುತ್ತಿರುವ ಘಟನೆಗೆ ಆಕೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಹಿಂದೆ ಪಿ.ಆರ್‍.ಕೆ. ಅಡಿಯಲ್ಲಿ ನಿರ್ಮಾಣವಾಗುತ್ತಿದ್ದ ಸಿನೆಮಾಗಳಿಗೆ ಪುನೀತ್ ರವರು ಕಥೆ ಹೇಳಿ ಅಂತಿಮಗೊಳಿಸುತ್ತಿದ್ದರು. O2 ಚಿತ್ರದವರೆಗೂ ಅಪ್ಪು ಕಥೆಯನ್ನು ಕೇಳಿದ್ದರು. ಇನ್ನು ಮುಂದೆ ನನ್ನ ಹಾಗೂ ನನ್ನ ಟೀಂ ನಿರ್ಧಾರ ಮಾಡುತ್ತದೆ ಎಂದು ಅಶ್ವಿನಿ ಹೇಳಿದ್ದಾರೆ. ಇನ್ನೂ ಅಶ್ವಿನಿಯವರ ವಿರುದ್ದ ಪೋಸ್ಟ್ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಪ್ಪು ಅಭಿಮಾನಿಗಳು ಆಕ್ರೋಷ ಹೊರಹಾಕುತ್ತಲೇ ಇದ್ದಾರೆ.

Most Popular

To Top