ಸಿನಿರಂಗದಲ್ಲಿ ಬ್ಯೂಟಿ, ಫಿಟ್ ನೆಸ್, ಅಭಿನಯ ಎಲ್ಲವೂ ಇದ್ದರೂ ಸಹ ಸಕ್ಸಸ್ ಕಂಡುಕೊಳ್ಳುವುದರಲ್ಲಿ ವಿಫಲರಾಗಿರುತ್ತಾರೆ. ಈ ಸಾಲಿಗೆ ಹಾಟ್ ನಟಿ ಸಮೀರಾರೆಡ್ಡಿ ಸಹ ಸೇರುತ್ತಾರೆ. ಟಾಲಿವುಡ್ ನಲ್ಲಿ ಸಾಲು ಸಾಲು ಅಪಜಯಗಳಿಂದ ಆಕೆ ಡಿಜಾಸ್ಟರ್ ನಟಿಯಾಗಿ ಉಳಿದರು. ಕೆರಿಯರ್ ಪರವಾಗಿ ಆಕೆ ಸಕ್ಸಸ್ ಕಾಣದೇ ಇದ್ದರೂ ಸಹ ವೈಯುಕ್ತಿಕ ಜೀವನ ಮಾತ್ರ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೆರಿಯರ್ ಆರಂಭದಲ್ಲಿ ಆಕೆ ಎದುರಿಸಿದ ಕೆಲವೊಂದು ಕಹಿ ಅನುಭವಗಳನ್ನು ಹಂಚಿಕೊಂಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.
ನಟಿ ಸಮೀರಾರೆಡ್ಡಿ ಓದುವ ಸಮಯದಲ್ಲೇ ಮಾಡಲಿಂಗ್ ಆಗಿ ಕೆರಿಯರ್ ಅನ್ನು ಪ್ರಾರಂಭ ಮಾಡಿದ್ದರು. ಮೈನೇ ದಿಲ್ ತುಜಕೋ ದಿಯಾ ಎಂಬ ಬಾಲಿವುಡ್ ಸಿನೆಮಾದ ಮೂಲಕ ನಟಿಯಾಗಿ ಪರಿಚಯವಾದರು. ಬಳಿಕ ಆಕೆಗೆ ದಕ್ಷಿಣದ ಸಿನೆಮಾಗಳಲ್ಲೂ ಸಹ ಆಫರ್ ಗಳನ್ನು ದಕ್ಕಿಸಿಕೊಂಡರು. ಇನ್ನೂ ನಟಿ ಸಮೀರಾರೆಡ್ಡಿ ತೆಲುಗಿನಲ್ಲಿ ಜೂನಿಯರ್ ಎನ್.ಟಿ.ಆರ್ ಜೊತೆಗೆ ನರಸಿಂಹುಡು ಎಂಬ ಸಿನೆಮಾದ ಮೂಲಕ ಕಾಲಿಟ್ಟರು. ಈ ಸಿನೆಮಾ ಆಕೆ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಬಳಿಕ ಮೆಗಾಸ್ಟಾರ್ ಚಿರಂಜೀವಿ ಜೊತೆ ಜೈ ಚಿರಂಜೀವ ಎಂಬ ಸಿನೆಮಾದಲ್ಲೂ ಕಾಣಿಸಿಕೊಂಡರು. ಬಳಿಕ ಸಮೀರಾ ಟಾಲಿವುಡ್ ಬಿಟ್ಟು ಹಿಂದಿ, ಕನ್ನಡ, ತಮಿಳು ಹಾಗೂ ಬೆಂಗಾಲಿ ಸಿನೆಮಾಗಳಲ್ಲಿ ನಟಿಸಿದರು. ಈ ಭಾಷೆಗಳಲ್ಲಿ ಆಕೆ ನಟಿಸುತ್ತಾ ಸಾಲು ಸಾಲು ಆಫರ್ ಗಳನ್ನು ದಕ್ಕಿಸಿಕೊಂಡು ಬ್ಯುಸಿಯಾದರು. ಇನ್ನೂ ಕೃಷ್ಣಂ ವಂದೇ ಜಗದ್ಗುರಂ ಎಂಬ ಸಿನೆಮಾದಲ್ಲಿ ಐಟಂ ಸಾಂಗ್ ಒಂದಕ್ಕೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು.
ಇನ್ನೂ ನಟಿ ಸಮೀರಾರೆಡ್ಡಿ ತನ್ನ ಕೆರಿಯರ್ ಆರಂಭದಲ್ಲಿ ಎದುರಿಸಿದ ಕೆಲವೊಂದು ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಕೆರಿಯರ್ ಆರಂಭದಲ್ಲಿ ನನ್ನ ಬ್ರೆಸ್ಟ್ ಸೈಜ್ ಚಿಕ್ಕದಾಗಿತ್ತು ಎಂದು ಹಿಯಾಳಿಸಿದ್ದರು. ಸರ್ಜರಿ ಮಾಡಿಸಿಕೋ ಎಂದು ಅನೇಕರು ಸಲಹೆ ನೀಡಿದ್ದರು. ಈ ಕಾಮೆಂಟ್ಸ್ ನನಗೆ ತುಂಬಾ ಒತ್ತಡ ತಂದುಕೊಟ್ಟಿತ್ತು. ಬ್ರೆಸ್ಟ್ ಬೆಳೆಸಿಕೊಳ್ಳುವ ಬಗ್ಗೆ ಕೆಲವೊಂದು ವಿಚಾರಗಳನ್ನು ಸಹ ಸಂಗ್ರಹಿಸಿದೆ. ಒಂದು ಸಮಯದಲ್ಲಿ ಸರ್ಜರಿ ಮಾಡಿಸಿಕೊಳ್ಳಲು ಸಹ ಮುಂದಾಗುತ್ತಿದೆ. ಜೊತೆಗೆ ಸಿನೆಮಾಗಳಲ್ಲಿ ಬ್ರೆಸ್ಟ್ ಸೈಜ್ ದೊಡ್ಡದಾಗಿ ಕಾಣಿಸಲು ಪ್ಯಾಡ್ಸ್ ಬಳಸುತ್ತಿದ್ದೆ. ಒಂದು ವೇಳೆ ನಾನು ಸರ್ಜರಿ ಮಾಡಿಸಿಕೊಂಡಿದ್ದರೇ ನಾನು ಸಂತೋಷವಾಗಿ ಇರೋಕೆ ಆಗುತ್ತಿರಲಿಲ್ಲ. ಅದಕ್ಕಾಗಿ ಸರ್ಜರಿ ಮಾಡಿಸಿಕೊಳ್ಳಿ ಎಂದು ನಾನು ಯಾರಿಗೂ ಹೇಳೊಲ್ಲ ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.