ಕನ್ನಡದ ಬಿಗ್ ಬಾಸ್ ಶೋನಲ್ಲಿ ಸ್ಫರ್ಧಿಯಾಗಿರುವ ವರ್ತೂರ್ ಸಂತೋಷ್ ರವರು ಈಗಾಗಲೇ ಹುಲಿ ಉಗುರು ಪ್ರಕರಣದಲ್ಲಿ ಭಾರಿ ಸುದ್ದಿಯಾಗಿದ್ದರು. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಬಳಿಕ ಜಾಮೀನು ಮೇಳೆ ಹೊರಬಂದು ಪುನಃ ಬಿಗ್ ಬಾಸ್ ಮನೆ ಸೇರಿದ್ದಾರೆ. ಯಶಸ್ವಿಯಾಗಿ 10 ವಾರ ಪೂರೈಸಿದ್ದಾರೆ. ಇದೀಗ ಮತ್ತೊಂದು ವಿವಾದದಲ್ಲಿ ವರ್ತೂರ್ ಸಿಕ್ಕಿಕೊಂಡಿದ್ದಾರೆ. ಕರ್ನಾಟಕದ ಹೆಮ್ಮೆಯ ದೇಸಿ ತಳಿ ರೈತರು ಸಭೆ ಮಾಡಿದ್ದು, ವರ್ತೂರ್ ಸಂತೋಷ್ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ಬಗ್ಗೆ ಮಾಗಡಿ ರೈತ ಜಯರಾಂ ಎಂಬುವವರು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ್ದು, ವರ್ತೂರ್ ಸಂತೋಷ್ ರನ್ನು ಹಳ್ಳಿಕಾರ್ ಒಡೆಯ ಎಂಬ ಹೇಳಿಕೆ ವಿರುದ್ದ ಕಿಡಿಕಾರಿದ್ದಾರೆ. ಹಳ್ಳಿಕಾರ್ ಒಡೆಯ ಯಾರೂ ಇಲ್ಲ. ಹಳ್ಳಿಕಾರ್ ಒಡೆಯ ಆಗಬೇಕಾದರೇ ಇಲಾಖೆಯಿಂದಲೇ ಹೆಸರು, ಬಿರುದು ಕೊಡಬೇಕು. ಯಾರೋ ಹತ್ತು ಜನ ಗುಂಪು ಮಾಡಿಕೊಂಡು ಕರೆದರೇ ಹಳ್ಳಿಕಾರ್ ಒಡೆಯ ಆಗೋಲ್ಲ. ಹಳ್ಳಿಕಾರ್ ಒಡೆಯ ಎಂಬ ಬಿರುದನ್ನು ಪಡೆದುಕೊಳ್ಳಲು ವರ್ತೂರ್ ಸಂತೋಷ್ ಅರ್ಹನೂ ಅಲ್ಲ, ಅದನ್ನು ತೆಗೆದುಕೊಳ್ಳುವಂತಹ ಯೋಗ್ಯತೆ ಸಹ ಇಲ್ಲ ಎಂದು ಹೇಳಿದ್ದಾರೆ.
ವರ್ತೂರ್ ಸಂತೋಷ್ ಯಾರು ಆತನನ್ನು ಹಳ್ಳಿಕಾರ ಒಡೆಯ ಮಾಡಿದ್ದಾದರೂ ಯಾರು. ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಆತ ಉತ್ತಮನಾದರೇ ಅವನೇ ಯೂಟ್ಯೂಬ್ ನವರಿಗೆ ಹೇಳಿ ಹಳ್ಳಿಕಾರ್ ಒಡೆಯ ಎಂಬುದನ್ನು ತೆಗೆಸಬೇಕು. 80 ವರ್ಷಗಳಿಂದ ದನ ಮೇಯಿಸುತ್ತಿದ್ದರೇ ಅಂತಹ ವ್ಯಕ್ತಿಗೆ ಹಳ್ಳಿಕಾರ್ ಒಡೆಯ ಎಂಬ ಬಿರುದು ಕೊಡಬಹುದು. ಅಂತಹುದರಲ್ಲಿ ಆತನಿಗೆ ಏಕೆ ಕೊಡಬೇಕು. ವರ್ತೂರ್ ರವರ ಮಾವ ಸಹ ಹೇಳಿದ್ದಾರೆ. ಆತ ದೊಡ್ಡ ಕಳ್ಳ ಎಂದಿದ್ದಾರೆ. ಅದಕ್ಕಿಂದ ದೊಡ್ಡ ಸಾಕ್ಷಿ ಮತ್ತೊಂದು ಬೇಕಾ. ನಾವು ಈ ಬಗ್ಗೆ ಹೋರಾಟ ಮಾಡ್ತೀವಿ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸ್ಪಷ್ಟನೆ ತೆಗೆದುಕೊಂಡು ನ್ಯಾಯಾಲಯದ ಮೆಟ್ಟಿಲು ಏರುತ್ತೀವಿ ಎಂದು ಆಕ್ರೋಷ ಹೊರಹಾಕಿದ್ದಾರೆ. ಇನ್ನೂ ವರ್ತೂರ್ ಸಂತೋಷ್ ರವರ ಬಗ್ಗೆ ಪರ-ವಿರೋಧ ವಾದಗಳು ಕೇಳಿಬರುತ್ತಲೇ ಇದೆ. ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಏನೆಲ್ಲಾ ಬೆಳವಣಿಗೆಗಳು ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.