Film News

ಮಾರಣಾಂತಿಕ ವೈರಸ್ ಬಂದು ಗಂಡಸರೆಲ್ಲಾ ಹೋಗಿಬಿಡಬೇಕು, ನಾನೊಬ್ಬನೇ ಸ್ತ್ರೀ ಜಾತಿಗೆ ದಿಕ್ಕಾಗಬೇಕು ಎಂದ ಆರ್.ಜಿ.ವಿ….!

ತೆಲುಗು ಸಿನಿರಂಗದಲ್ಲಿ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಾಂಟ್ರವರ್ಸಿ ನಿರ್ದೇಶಕ ಎಂದೇ ಖ್ಯಾತಿ ಪಡೆದುಕೊಂಡ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯಾವುದೇ ವಿಚಾರವಿರಲಿ ನೇರವಾಗಿ ಹೇಳುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ವರ್ಮಾ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹೇಳಿಕೆಗಳು ಹಾಟ್ ಟಾಪಿಕ್ ಆಗಿದೆ.

ಇತ್ತೀಚಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ವಿದ್ಯಾಲಯದಲ್ಲಿ ಅಕಾಡೆಮಿಕ್ ಸೈನ್ಸ್ ಎಜ್ಗಿಬಿಷನ್ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹಾಜರಾಗಿದ್ದರು. ಈ ವೇಳೆ ಅವರು ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇಷ್ಟವಾದದ್ದು ತಿನ್ನಿ, ಕುಡಿಯಿರಿ ಎಂಜಾಯ್ ಮಾಡಿ ಎಂದು ಅನೇಕ ಹೇಳಿಕೆಗಳನ್ನು ನೀಡಿದ್ದಾರೆ.

ಸತ್ತ ಮೇಲೆ ಸರ್ವಕ್ಕೆ ಹೋದರೇ ರಂಭ, ಊರ್ವಸಿ ಯಂತಹವರು ಇರುತ್ತಾರೆ ಎಂದು ಅಂದುಕೊಳ್ಳಬೇಡಿ. ಆದ್ದರಿಂದ ಇಲ್ಲೇ ನಮ್ಮ ಜೀವನ ಎಂಜಾಯ್ ಮಾಡಬೇಕು. ಯಾವುದಾದರೂ ಮಾರಾಣಾಂತಿಕ ವೈರಸ್ ಬಂದು ಇಡೀ ಗಂಡು ಜಾತಿ ಹೋಗಿಬಿಡಬೇಕು. ಸ್ತ್ರೀ ಜಾತಿಗೆ ನಾನೊಬ್ಬನೇ ಆಸರೆಯಾಗಬೇಕು. ನಾಲ್ಕೂವರೆ ಲಕ್ಷ ಧಾರಾವಿ ಪ್ರಜೆಗಳು ಒಂದು ಕಡೆಯಾದರೇ, ಕತ್ರಿನಾ ಕಾಲುಗಳು ಒಂದು ಕಡೆಯಿದ್ದರೇ ನನ್ನ ಆದ್ಯತೆ ಕತ್ರಿನಾ ಕಾಲುಗಳಿಗೆ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರಾಣಿಗಳಿಗೆ ಇರುವ ಸ್ವತಂತ್ರ ಮನುಷ್ಯರಿಗೆ ಇಲ್ಲ. ನಾನು ಅನಿಮಲ್ ಲವರ್‍ ಅಲ್ಲ. ಸುಂದರವಾದ ಹುಡುಗಿಯರ ಜಾತಿಯನ್ನು ಮಾತ್ರ ಪ್ರೀತಿಸುತ್ತೇನೆ. ನಾನು ಸತ್ತ ಮೇಲೆ ಇಡೀ ಪ್ರಪಂಚ ಅಂತ್ಯವಾದರೂ ನಾನು ಲೆಕ್ಕಿಸುವುದಿಲ್ಲ. ನಾನು ನನಗಾಗಿಯೇ ಬದುಕುತ್ತಿದ್ದೇನೆ ಎಂದು ಅನೇಕ ಹೇಳಿಕೆಗಳನ್ನು ನೀಡಿದ್ದಾರೆ.

ಇನ್ನೂಆರ್‍.ಜಿ.ವಿ ಹೇಳಿಕೆಗಳನ್ನು ಪ್ರೊ. ವಿ.ಸಿ.ರಾಜಶೇಖರ್‍ ಸಹ ಬೆಂಬಲಿಸಿದ್ದಾರೆ. ವರ್ಮಾ ಓರ್ವ ಪ್ರೊಫೆಸರ್‍,  ಫಿಲಾಸಫರ್‍ ಗಿಂತಲೂ ಹೆಚ್ಚು ಎಂದು ಪ್ರಶಂಸೆ ಮಾಡಿದ್ದಾರೆ. ಸದ್ಯ ವರ್ಮಾ ಹೇಳಿಕೆಗಳು ವಿವಾದ ಸೃಷ್ಟಿ ಮಾಡಿದೆ. ಈ ಬಗ್ಗೆ ಯಾವ ರೀತಿಯಲ್ಲಿ ಚರ್ಚೆಗಳು, ರಾಮ್ ಗೋಪಾಲ್ ವರ್ಮಾ ಬಗ್ಗೆ ಯಾವ ರೀತಿಯ ವಿಮರ್ಶೆಗಳು ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top