ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ನಮ್ಮ ಕರುನಾಡ ನಡೆದಾಡುವ ದೇವರು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ನಿಧನ ಹೊಂದಿದ್ದರು. ಶ್ರೀಗಳ ಅಂತಿಮ ಸಂಸ್ಕಾರ ಇಂದು ತುಮಕೂರು ನಲ್ಲಿಯೇ ನಡೆಯಲಿದೆ. ಶ್ರೀಗಳ ಅಂತಿಮ ದರ್ಶನವನ್ನು ಪಡೆಯಲು ಕನ್ನಡ ಚಿತ್ರ ರಂಗದ ನಟರು ಹಾಗು ಕಲಾವಿದರು ತುಮಕೂರಿಗೆ ಬಂದಿದ್ದಾರೆ. ಕನ್ನಡ ನಟರಾದ ದರ್ಶನ್, ಜಗ್ಗೇಶ್, ಪುನೀತ್ ರಾಜಕುಮಾರ್, ಶಿವಣ್ಣ, ಯಶ್, ಉಪೇಂದ್ರ ಅವರು ಕೂಡ ಬಂದಿದ್ದಾರೆ. ಈ ಸಮಯದಲ್ಲಿ ಮಠದ ಮತ್ತೊಬ್ಬರು ಸ್ವಾಮೀಜಿ ಮಾತಾಡಬೇಕಾದ್ರೆ ಶ್ರೀಗಳು “ನನಗೆ ಈ ಭೂಮಿ ಮೇಲೆ 111 ವರ್ಷ ಸಾಕಾಗಿದೆ ಎಂದು ಹೇಳಿದ್ದರು” ಎಂದು ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ತುಮಕೂರ ಸಿದ್ಧಗಂಗಾ ಮಠದ ಸ್ವಾಮೀಜಿ ಗಳು ಸುಮಾರು 30 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಎಷ್ಟೋ ಲಕ್ಷ ಮಕ್ಕಳಿಗೆ ನಿತ್ಯ ಅನ್ನ ದಾನ ಮಾಡುತ್ತಿದ್ದಾರೆ. ಇದಲ್ಲದೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಔಷಧಿ ವ್ಯವಸ್ಥೆ, ಉಚಿತ ಆಸ್ಪತ್ರೆಯಲ್ಲಿ ತಪಾಸಣೆ, ಉಚಿತ ಊಟ, ಹಾಗು ತಿಂಡಿ ಮಠದಲ್ಲಿ ನೀಡುತ್ತಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರ್ನಾಟಕ ತುಮಕೂರು ಜಿಲ್ಲೆಯಲ್ಲಿ ಶೇಕಡಾ 80 % ಗಿಂತ ಹೆಚ್ಚು ಮಕ್ಕಳು ಶ್ರೀಗಳ ಸಮಸ್ತೆಯಲ್ಲೆ ಶಿಕ್ಷಣ ವನ್ನು ಈಗಲೂ ಕೂಡ ಪಡೆಯುತ್ತಿದ್ದಾರೆ. ಶ್ರೀ ಗಳಿಗೆ Nadedaduva Devaru, Kayaka Yogi, Siddaganga ಸ್ವಾಮೀಜಿಗಳು ಎಂದು ಕೂಡ ಕರೆಯಲಾಗುತ್ತದೆ. ಶ್ರೀಗಳನ್ನು ನೋಡಲು ನೆನ್ನೆ ಅಷ್ಟೇ ನಮ್ಮ ಕರ್ನಾಟಕದ ರಾಜಕೀಯ ಗಣ್ಯರು ಕೂಡ ಬಂದು ಶ್ರೀಗಳ ಅರೋಗ್ಯ ವಿಚಾರಿಸಿದ್ದರು.
ತುಮಕೂರು ಶ್ರೀಗಳಿಗೆ 2007 ರಲ್ಲಿ ಕರ್ನಾಟಕ ಸರ್ಕಾರ ದಿಂದ Karnataka ರತ್ನ ಅವಾರ್ಡ್ ಕೂಡ ಬಂದಿತ್ತು. ಇದಲ್ಲದೆ ತುಮಕೂರು ಶ್ರೀಗಳನ್ನು ನರೇಂದ್ರ ಮೋದಿ, ಅಡ್ವಾಣಿ, ಅಬ್ದುಲ್ ಕಲಾಂ, ಇದಲ್ಲದೆ ಕನ್ನಡ ಚಿತ್ರ ತಾರೆಯರಾದ ಶಿವಣ್ಣ, ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಜಗ್ಗೇಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಅವರು ಕೂಡ ಕಳೆದ ವರ್ಷ ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು. ಇದಲ್ಲದೆ ಶಿವಣ್ಣ ಅವರ ಟಗರು ಚಿತ್ರದಲ್ಲಿ ಶ್ರೀಗಳನ್ನು ಭೇಟಿ ಮಾಡುವ ಒಂದು ದೃಶ್ಯ ಕೂಡ ನಿರ್ದೇಶಕ ಸೂರಿ ಅವರು ಹಾಕಿದ್ದರು. ಶ್ರೀಗಳ ನಿಧನದ ಸುದ್ದಿಯನ್ನು ಕೇಳಿ ಇಡೀ ಕರ್ನಾಟಕವೇ ದುಃಖದಲ್ಲಿದೆ.
ನಮ್ಮ ಸಿದ್ಧಗಂಗಾ ಶ್ರೀಗಳು ಸಾಧನೆಗಳು, ನಮ್ಮ ಸಮಾಜಕ್ಕೋಸ್ಕರ ಮಾಡಿದ ಅದ್ಭುತ ಕೆಲಸಗಳನ್ನು ಮರೆಯಲು ಸಾಧ್ಯವಿಲ್ಲ. ಶ್ರೀಗಳ ಶಾಲೆಯಲಿ ಓದಿರುವ ವಿದ್ಯಾರಿಟ್ಗಳು ಇಂದು ಅಮೇರಿಕ, ಆಸ್ಟ್ರೇಲಿಯಾ, ಹಾಗು ಹಲವಾರು ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಶ್ರೀಗಳ ಹತ್ತಿರ ಓದಿರುವ ಎಲ್ಲಾ ವಿದ್ಯಾರ್ಥಿಗಳು ತಾವು ಯಾವುದೇ ದೇಶದಲ್ಲಿ ಪ್ರತಿ ವರ್ಷಕ್ಕೊಮ್ಮೆ ತುಮಕೂರಿಗೆ ಬಂದು ಶ್ರೀಗಳನ್ನು ಭೇಟಿ ಮಾಡಿ ಹೋಗುತ್ತಿದ್ದರು. ನಮ್ಮ ಶ್ರೀಗಳು ಜಾತಿ, ಧಾರ್ಮ ಲೆಕ್ಕಿಸದೆ ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾ ದಾನ ಹಾಗು ಅನ್ನ ದಾನ ಮಾಡುತ್ತಿದ್ದರು. ಶ್ರೀಗಳ ಕೆಲಸಗಳ ಬಗ್ಗೆ, ನಮ್ಮ ಸಮಾಜಕ್ಕೆ ಕೊಟ್ಟ ಕಾಣಿಕೆಗಳ ಬಗ್ಗೆ ಒಂದೆರಡು ಆರ್ಟಿಕಲ್ ಗಳಲ್ಲಿ ಹೇಳಲು ಸಾಧ್ಯವಿಲ್ಲ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ.
ನಮ್ಮ ತುಮಕೂರ ಸಿದ್ಧಗಂಗಾ ಮಠದ ಸ್ವಾಮೀಜಿ ಗಳು ಸುಮಾರು 30 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಎಷ್ಟೋ ಲಕ್ಷ ಮಕ್ಕಳಿಗೆ ನಿತ್ಯ ಅನ್ನ ದಾನ ಮಾಡುತ್ತಿದ್ದಾರೆ. ಇದಲ್ಲದೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಔಷಧಿ ವ್ಯವಸ್ಥೆ, ಉಚಿತ ಆಸ್ಪತ್ರೆಯಲ್ಲಿ ತಪಾಸಣೆ, ಉಚಿತ ಊಟ, ಹಾಗು ತಿಂಡಿ ಮಠದಲ್ಲಿ ನೀಡುತ್ತಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರ್ನಾಟಕ ತುಮಕೂರು ಜಿಲ್ಲೆಯಲ್ಲಿ ಶೇಕಡಾ 80 % ಗಿಂತ ಹೆಚ್ಚು ಮಕ್ಕಳು ಶ್ರೀಗಳ ಸಮಸ್ತೆಯಲ್ಲೆ ಶಿಕ್ಷಣ ವನ್ನು ಈಗಲೂ ಕೂಡ ಪಡೆಯುತ್ತಿದ್ದಾರೆ. ಶ್ರೀ ಗಳಿಗೆ Nadedaduva Devaru, Kayaka Yogi, Siddaganga ಸ್ವಾಮೀಜಿಗಳು ಎಂದು ಕೂಡ ಕರೆಯಲಾಗುತ್ತದೆ. ಶ್ರೀಗಳನ್ನು ನೋಡಲು ನೆನ್ನೆ ಅಷ್ಟೇ ನಮ್ಮ ಕರ್ನಾಟಕದ ರಾಜಕೀಯ ಗಣ್ಯರು ಕೂಡ ಬಂದು ಶ್ರೀಗಳ ಅರೋಗ್ಯ ವಿಚಾರಿಸಿದ್ದರು.
