Film News

ನನ್ನ ಮೇಲೆ ವಿಷ ಪ್ರಯೋಗ ನಡೆದಿತ್ತು ಎಂದು 35 ವರ್ಷಗಳ ಬಳಿಕ ಶಾಕಿಂಗ್ ವಿಚಾರ ಹೊರಹಾಕಿದ ಮೆಗಾಸ್ಟಾರ್ ಚಿರಂಜೀವಿ…!

ಸಿನಿರಂಗದಲ್ಲಿ ಸಹ ರಾಜಕೀಯ, ಕುತಂತ್ರಗಳು ಇರುತ್ತವೆ, ಒಬ್ಬರು ಬೆಳೆಯುತ್ತಿದ್ದರೇ, ಅವರನ್ನು ಯಾವ ರೀತಿಯಲ್ಲಿ ಕೆಳಗೆ ತಳ್ಳಬೇಕು ಎಂದು ಕಾಯುತ್ತಿರುವವರು ತುಂಬಾನೆ ಇರುತ್ತಾರೆ. ಸಿನಿರಂಗದಲ್ಲಿ ಇದು ದೊಡ್ಡ ಮಟ್ಟದಲ್ಲೇ ಇರುತ್ತದೆ. ಇದೀಗ ಮೆಗಾಸ್ಟಾರ್‍ ಚಿರಂಜೀವಿಯವರ ಮೇಲೂ ಸಹ ಅಂತಹುದೇ ಪ್ರಯೋಗ ನಡೆದಿತ್ತು. ಆತನನ್ನು ಕೊಲೆ ಮಾಡಲು ವಿಷಯ ಪ್ರಯೋಗ ಸಹ ಮಾಡಲಾಗಿತ್ತಂತೆ. ಇದೀಗ ಮೆಗಾಸ್ಟಾರ್‍ ಚಿರಂಜೀವಿಯವರೆ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮೂವತ್ತೈದು ವರ್ಷಗಳ ಬಳಿಕ ಚಿರಂಜೀವಿ ಆ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ದೇಶದ ಸಿನಿರಂಗದ ಸ್ಟಾರ್‍ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿಯವರು ಸಹ ಒಬ್ಬರಾಗಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಚಿರಂಜೀವಿ ಕೆಲವೊಂದು ಆಸಕ್ತಿಕರವಾದ ವಿಚಾರಗಳನ್ನು ಹೊರಹಾಕಿದ್ದಾರೆ. ಕಳೆದ 1988 ರಲ್ಲಿ ನಡೆದ ಸಂಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. 1988 ರಲ್ಲಿ ನಿರ್ದೇಶಕ ಕೋದಂಡರಾಮಿಸ್ವಾಮಿ ಸಾರಥ್ಯದಲ್ಲಿ ಮರಣ ಮೃದಂಗಂ ಎಂಬ ಸಿನೆಮಾದ ಶೂಟಿಂಗ್ ನಡೆಯುತ್ತಿತ್ತು. ಚೆನೈನಲ್ಲಿ ಈ ಶೂಟಿಂಗ್ ನಡೆಯುತ್ತಿತ್ತು. ಪ್ರತಿನಿತ್ಯ ಚಿರಂಜೀವಿ ಆತನ ಅಭಿಮಾನಿಗಳನ್ನು ಶೂಟಿಂಗ್ ಬಿಡುವಿನಲ್ಲಿ ಬಂದು ಮಾತನಾಡಿ ಹೋಗುತ್ತಿದ್ದರು.ಶೂಟಿಂಗ್ ಸೆಟ್ ನಲ್ಲಿ ಕೇಕ್ ಕತ್ತರಿಸುತ್ತಿದ್ದೆವು. ಒಬ್ಬ ಅಭಿಮಾನಿ ಬಂದು ನನಗೆ ಕೇಕ್ ತಿನ್ನಿಸಿದರು. ಆಗ ಕೇಕ್ ನನಗೆ ಕಹಿಗಾಗಿ ಅನ್ನಿಸಿತ್ತು. ಕೂಡಲೇ ಅದನ್ನು ಉಗಿದುಬಿಟ್ಟೆ.

ಬಳಿಕ ನನ್ನ ಪಕ್ಕದಲ್ಲೇ ಇದ್ದ ನಿರ್ಮಾಪಕ ಕೆ.ಎಸ್.ರಾಮಾರಾವ್ ರವರಿಗೆ ಅನುಮಾನ ಬಂದಿದ್ದು, ಆತನನ್ನು ಹಿಡಿದು ಪರೀಕ್ಷೆಗಾಗಿ ಕಳುಹಿಸಿದರು. ಬಳಿಕ ಆತನನ್ನು ಬಲವಾಗಿ ಪ್ರಶ್ನೆ ಮಾಡಿದ ಬಳಿಕ ಆತ ಚಿರಂಜೀವಿಯವರು ನನ್ನ ಬಳಿ ಮಾತನಾಡುತ್ತಿಲ್ಲ. ಕೇರಳದಿಂದ ವಶೀಕರಣಕ್ಕೆ ಸಂಬಂಧಿಸಿದ ಪದಾರ್ಥವನ್ನು ತಂದು ಚಿರಂಜೀವಿಯವರಿಗೆ ತಿನ್ನಿಸಲು ಪ್ರಯತ್ನ ಮಾಡಿದೆ ಎಂದು ಆ ವ್ಯಕ್ತಿ ಹೇಳಿದ್ದರು. ಬಳಿಕ ಆತನನ್ನು ನಾನು ಬಿಟ್ಟುಬಿಡಿ ಎಂದು ಹೇಳಿದ್ದೆ ಎಂದು ಚಿರಂಜೀವಿ ಹೇಳಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಮತ್ತೊಂದು ಕಥೆ ಸಹ ಇದೆ. ಚಿರಂಜೀವಿ ಅಭಿವೃದ್ದಿಯಾಗುತ್ತಿರುವುದು ಕೆಲವರಿಗೆ ಇಷ್ಟವಾಗದೆ ಚಿರು ಮೇಲೆ ವಿಷ ಪ್ರಯೋಗ ಮಾಡಲಾಗಿತ್ತು. ಕೇಕ್ ತಿಂದ ಚಿರಂಜೀವಿ ಅಸ್ವಸ್ಥರಾಗಿದ್ದು, ಬಳಿಕ ಅವರನ್ನು ಚೆನೈನಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಚಿಕಿತ್ಸೆಯನ್ನು ಸಹ ಪಡೆದುಕೊಂಡಿದ್ದರು. ಈ ಬಗ್ಗೆ ಕೆಲವು ಮಾದ್ಯಮಗಳು ಮಾತ್ರ ಸುದ್ದಿ ಪ್ರಸಾರ ಮಾಡಿತ್ತು ಎಂದು ಮಾತುಗಳೂ ಸಹ ಕೇಳಿಬಂದಿದೆ.

ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಹಾಗೂ ಖ್ಯಾತ ನಿರ್ದೇಶಕ ಬಾಬಿ ಕಾಂಬಿನೇಷನ್ ನಲ್ಲಿ ಮೂಡಿ ಬಂದ ವಾಲ್ತೇರು ವೀರಯ್ಯ ಸಿನೆಮಾ ಜ.13 ರಂದು ಬಿಡುಗಡೆಯಾಗಿದ್ದು, ಈ ಸಿನೆಮಾ ಪಕ್ಕಾ ಮಾಸ್ ಆಕ್ಷನ್ ಎಂಟರ್‍ ಟೈನ್ ಸಿನೆಮಾ ಆಗಿದೆ. ಈ ಸಿನೆಮಾ ಯಾವ ರೀತಿಯಲ್ಲಿ ಸಕ್ಸಸ್ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳನ್ನೂ ಸಹ ಚಿತ್ರತಂಡ ಅದ್ದೂರಿಯಾಗಿ ನಿರ್ವಹಿದೆ.

Most Popular

To Top