Film News

ಬನ್ನಿ ಜೊತೆಗೆ ನಟಿಸೋ ಅವಕಾಶ ಬಂದ್ರೆ ಅದು ನನ್ನ ಜೀವನದಲ್ಲೇ ದೊಡ್ಡ ಅದೃಷ್ಟ ಎಂದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ……!

ಟಾಲಿವುಡ್ ಸ್ಟಾರ್‍ ನಟ ಅಲ್ಲು ಅರ್ಜುನ್ ರವರು ಸದ್ಯ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಪುಷ್ಪಾ ಸಿನೆಮಾದ ಮೂಲಕ ಇಡೀ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡರು. ಬನ್ನಿ ಎಂದರೇ ಕೇವಲ ಸಾಮಾನ್ಯ ಅಭಿಮಾನಿಗಳು ಮಾತ್ರವಲ್ಲದೇ  ಸ್ಟಾರ್‍ ನಟ-ನಟಿಯರು ಸಹ ಅಭಿಮಾನಿಸುತ್ತಾರೆ. ಜೊತೆಗೆ ಅನೇಕ ನಟಿಯರು ಆತನ ಜೊತೆಗೆ ನಟಿಸಲು ಆಸೆಪಡುತ್ತಿರುತ್ತಾರೆ. ಇದೀಗ ಸ್ಯಾಂಡಲ್ ವುಡ್ ಸ್ಟಾರ್‍ ನಟ ಕಿಚ್ಚ ಸುದೀಪ್ ರವರ ಪುತ್ರಿ ಸಾನ್ವಿ ಸಹ ಅಲ್ಲು ಅರ್ಜುನ್ ರವರಿಗೆ ಬಿಗ್ ಫ್ಯಾನ್ ಅಂತೆ. ಜೊತೆಗೆ ಆತನ ಜೊತೆಗೆ ನಟಿಸುವ ಅವಕಾಶ ಬಂದರೇ ಅದು ಆಕೆಯ ಜೀವನದಲ್ಲೇ ದೊಡ್ಡ ಅದೃಷ್ಟ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ಐಕಾನ್ ಸ್ಟಾರ್‍, ಸ್ಟೈಲಿಷ್ ಸ್ಟಾರ್‍, ಹ್ಯಾಂಡ್ಸಮ್ ಹಿರೋ ಎಂದೇ ಸ್ಟಾರ್‍ ನಟ ಅಲ್ಲು ಅರ್ಜುನ್ ರವರನ್ನು ಕರೆಯಲಾಗುತ್ತದೆ. ಆತ ಅನೇಕ ಯುವತಿಯರ ಕ್ರಷ್ ಆಗಿದ್ದಾರೆ. ರೊಮ್ಯಾಂಟಿಕ್ ಇಮೇಜ್ ಸಾಧಿಸಿದ ಅಲ್ಲು ಅರ್ಜುನ್ ರವರ ಜೊತೆಗೆ ನಟಿಸಲು ಸ್ಟಾರ್‍ ನಟಿಯರು ತುದಿಗಾಲಿನ ಮೇಲೆ ನಿಂತಿರುತ್ತಾರೆ. ಇದೀಗ ಕನ್ನಡದ ಸ್ಟಾರ್‍ ನಟ ಕಿಚ್ಚ ಸುದೀಪ್ ರವರ ಪುತ್ರಿ ಸಹ ಅಲ್ಲು ಅರ್ಜುನ್  ಮೇಲಿನ ಕ್ರಷ್ ಅನ್ನು ಹೊರಹಾಕಿದ್ದಾರೆ. ಈ ಹಿಂದೆ ತೆಲುಗು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿದ್ದ ಅಲ್ಲು ಅರ್ಜುನ್ ಕ್ರೇಜ್ ಪುಷ್ಪಾ ಸಿನೆಮಾದ ಬಳಿಕ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡರು ಎಂದೇ ಹೇಳಬಹುದು. ಇದೀಗ ಅಲ್ಲು ಅರ್ಜುನ್  ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಕಿಚ್ಚ ಸುದೀಪ್ ರವರ ಪುತ್ರಿ ಬನ್ನಿ ಬಗ್ಗೆ ಹೇಳಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸೌತ್ ನಲ್ಲಿ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನೆಮಾಗಳಲ್ಲೂ ಸಹ ನಟಿಸಿ ಫೇಂ ಪಡೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಸಾನ್ವಿ ಸಹ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಆಗಾಗ ಆಕೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸುತ್ತಿರುತ್ತಾರೆ. ಇದೀಗ ಆಕೆ ಅಲ್ಲು ಅರ್ಜುನ್ ರವರ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ರವರ ಎಲ್ಲಾ ಸಿನೆಮಾಗಳನ್ನು ನೋಡಿದ್ದೇನೆ. ಅವರ ಜೊತೆಗೆ ಒಂದು ಪೊಟೋ ತೆಗೆಸಿಕೊಳ್ಳುವ ಅವಕಾಶ ಬಂದರೇ ಸಾಕು.  ಅಷ್ಟೇ ಅಲ್ಲ ಅವರ ಜೊತೆಗೆ ನಟಿಸುವ ಸಣ್ಣ ಪಾತ್ರದ ಅವಕಾಶ ಬಂದರೂ ನನ್ನ ಜನ್ಮ ಸಾರ್ಥಕ. ಅದಕ್ಕಿಂತ ಮತ್ತೊಂದು ಅದೃಷ್ಟ ಬೇರೆದು ಇಲ್ಲ ಎಂದು ಹೇಳಿದ್ದಾರೆ. ಸದ್ಯ ಸಾನ್ವಿ ಹಂಚಿಕೊಂಡ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ. ಬನ್ನಿ ಅಭಿಮಾನಿಗಳು ಈ ಕಾಮೆಂಟ್ಸ್ ಗೆ ಸಂಬಂಧಿಸಿದಂತಹ ಸ್ಕ್ರೀನ್ ಶಾಟ್ಸ್ ಸಹ ಶೇರ್‍ ಮಾಡುತ್ತಿದ್ದಾರೆ.

Most Popular

To Top