News

ಕೆಜಿಫ್ ಚಿತ್ರವನ್ನು ಬೇರೆ ಭಾಷೆಯ ನಟರು ಹೊಗಳಿದ್ದಾರೆ? ಆದರೆ ನಮ್ಮ ನಟರು ಯಾಕೆ ಇನ್ನೂ ನೋಡಿಲ್ಲ!

stars

ನಿಮಗೆಲ್ಲ ಗೊತ್ತಿರೋ ಹಾಗೆ ಕೆಜಿಫ್ ಚಿತ್ರ ಕಳೆದ ತಿಂಗಳು ಬಿಡುಗಡೆ ಆಗಿ ಎಲ್ಲೆಡೆ ಭಾರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ನಮ್ಮ ಕೆಜಿಫ್ ಚಿತ್ರದ ಸಕ್ಸಸ್ ಪಾರ್ಟಿ ಕೂಡ ಬೆಂಗಳೂರಿನಲ್ಲಿ ನಡೆದಿತ್ತು. ಕರ್ನಾಟಕ ಅಲ್ಲದೆ ಕೆಜಿಫ್ ಚಿತ್ರ ಹೊರ ರಾಜ್ಯ ಗಳಲ್ಲಿ ಹಾಗು ಹೊರ ದೇಶ ಗಳಲ್ಲಿ ಕೂಡ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕೆಜಿಫ್ ಚಿತ್ರ ತನ್ನ 25 ದಿನಗಳನ್ನು ಮುಗಿಸಿ ಈಗ 50 ದಿನಗಳತ್ತ ಮುನ್ನುಗ್ಗುತ್ತಿದೆ. ಕೆಜಿಫ್ ಚಿತ್ರವನ್ನು ನೋಡಿ ಬಾಲಿವುಡ್ ನಟರು, ಬಾಲಿವುಡ್ ನಿರ್ದೇಶಕರು, ಬಾಲಿವುಡ್ ನಿರ್ಮಾಪಕರು, ತೆಲುಗು , ತಮಿಳು ಚಿತ್ರದ ನಟರು, ಮಲಯಾಳಂ ಕಲಾವಿದರು ಕೂಡ ಕೆಜಿಫ್ ಚಿತ್ರವನ್ನು, ಯಶ್ ಅವರನ್ನು ಹಾಡಿ ಹೊಗಳಿದ್ದರು. ಆದರೆ ನಮ್ಮ ಕನ್ನಡದ ಸೂಪರ್ ಸ್ಟಾರ್ಸ್ ಗಳು, ಕನ್ನಡದ ದೊಡ್ಡ ದೊಡ್ಡ ನಟರು ಯಾಕೆ ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿಲ್ಲ? ಚಿತ್ರವನ್ನು ಇನ್ನೂ ಕೂಡ ನೋಡಿಲ್ಲ? ಇದಕ್ಕೆ ಕಾರಣ ಏನಿರಬಹುದು! ಇದರ ಬಗ್ಗೆ ನಮ್ಮ ಒಂದು ಅನಿಸಿಕೆ, ಈ ಸ್ಟೋರಿ ಓದಿರಿ
ಮೊನ್ನೆ ಅಷ್ಟೇ ಕೆಜಿಫ್ ಚಿತ್ರವನ್ನು ತಮಿಳು ನಟರಾದ ವಿಜಯ್, ವಿಕ್ರಂ, ಹಾಗು ಪ್ರಭುದೇವ ಅವರು ನೋಡಿ ಕೆಜಿಫ್ ತಂಡವನ್ನು, ಯಶ್ ಅವರನ್ನು ಹದಿ ಹೊಗಳಿದ್ದಾರೆ. ಇದಲ್ಲದೆ ಒಂದು ವಾರದ ಹಿಂದೆ ತೆಲುಗು ಸ್ಟಾರ್ ರಾಮ್ ಚರಣ್ ಹಾಗು ಅಲ್ಲೂ ಅರ್ಜುನ್ ಅವರು ಕೂಡ ಚಿತ್ರವನ್ನು ನೋಡಿ ಭೇಷ್ ಅಂದಿದ್ದರು. ಇದಲ್ಲದೆ ಬಾಲಿವುಡ್ ನಂತರದ faran ಅಕ್ತರ್, ಶಾರುಖ್ ಖಾನ್, ರವೀನಾ ಟಂಡನ್ ಸೇರಿ ಹಲವಾರು ನಟರು ಕೂಡ ಈ ಚಿತ್ರದ ಬಗ್ಗೆ ಮಾತಾಡಿದ್ದರು. ಆದರೆ ನಮ್ಮ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಹಾಗು ಶಿವಣ್ಣ ಅವರನ್ನು ಬಿಟ್ಟರೆ ಯಾವ ಕನ್ನಡ ನಟರು ಕೂಡ ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತನ್ನು ಆಡಿಲ್ಲ. ಇದು ನಿಜಕ್ಕೂ ಬೇಸರ ತಂದಿರುವ ವಿಷ್ಯ.
ಕನ್ನಡ ಸೂಪರ್ ಸ್ಟಾರ್ ಆದ ಕಿಚ್ಚ ಸುದೀಪ್ ಅವರು ಹಾಗು ಯಶ್ ಅವರು ಬಹಳ ಒಳ್ಳೆಯ ಸ್ನೇಹಿತರು. ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯಶ್ ಅವರು ಕೂಡ ಭಾಗವಹಿಸಿದ್ದರು. ಇವರಿಬ್ಬರ ದೋಸ್ತಿ ಬಹಳ ಚನ್ನಾಗಿದೆ. ಆದರೂ ಕೂಡ ನಮ್ಮ ಕಿಚ್ಚ ಸುದೀಪ್ ಅವರು ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಅಥವಾ ಟ್ವೀಟ್ ಕೂಡ ಮಾಡಿಲ್ಲ. ಇದಲ್ಲದೆ ಇತ್ತೀಚಿಗೆ ಪಬ್ಲಿಕ್ ಟಿವಿ ಒಂದು ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬಹಳ ಅದ್ಭುತ ರೀತಿಯಲ್ಲಿ ಮೈಸೂರು ದಸರಾ ಬಗ್ಗೆ ಮಾತಾಡಿದ್ದರು. ದರ್ಶನ್ ಹಾಗು ಯಶ್ ಅವರು ಕೂಡ ಒಳ್ಳೆಯ ಸ್ನೇಹಿತರು ಎಂದೇ ಹೇಳಬಹುದು. ಆದರೂ ದರ್ಶನ್ ಅವರು ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಕೂಡ ಅಥವಾ ಟ್ವೀಟ್ ಕೂಡ ಮಾಡಿರಲಿಲ್ಲ. ಬಲ್ಲ ಮೂಲಗಳ ಪ್ರಕಾರ ಇದಕೆಲ್ಲ ಕಾರಣ ಅವರವರ ಅಭಿಮಾನಿಗಳು ಅಂತ ಕೆಲವರು ಹೇಳುತ್ತಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ಸುದೀಪ್ ಹಾಗು ದರ್ಶನ್ ಅವರು ಕೆಜಿಫ್ ಚಿತ್ರದ ಬಗ್ಗೆ ಮಾತಾಡಿಲ್ಲ ಅಂತ ಕೆಲವು ಹೇಳುತ್ತಿದ್ದಾರೆ.
ಇನ್ನೊಂದೆಡೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗು ಶಿವಣ್ಣ ಅವರು ಕೆಜಿಫ್ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ಪುನೀತ್ ರಾಜಕುಮಾರ್ ಅವರು ಹೊರ ದೇಶದಲ್ಲಿದ್ದರು ಒಂದು ವಿಡಿಯೋ ಮಾಡಿ ಕೆಜಿಫ್ ಚಿತ್ರಕ್ಕೆ, ಯಶ್ ಅವರಿಗೆ ಶುಭ ಹಾರೈಸಿದ್ದರು. ಇದಲ್ಲದೆ ಶಿವಣ್ಣ ಅವರು ಒಂದು ಕಾರ್ಯಕ್ರಮದಲ್ಲಿ ಯಶ್ ಹಾಗು ಕೆಜಿಫ್ ಚಿತ್ರದ ಬಗ್ಗೆ ಮಾತಾಡಿ, ಕನ್ನಡದಲ್ಲಿ ಇಂತಹ ಪ್ರಯತ್ನಗಳು ಇನ್ನೂ ಬರಬೇಕು, ಕನ್ನಡ ಚಿತ್ರರಂಗದ ಮಾರ್ಕೆಟ್ ಇನ್ನೂ ಬೆಳೀಬೇಕು ಎಂದು ಹೇಳಿದ್ದರು. ಇದಲ್ಲದೆ ಕನ್ನಡದ ಮತೊಬ್ಬ ಹಿರಿಯ ನಟರಾದ ನವರಸ ನಾಯಕ ಜಗ್ಗೇಶ್ ಅವರು ಕೂಡ ಕೆಜಿಫ್ ಚಿತ್ರದ ಬಗ್ಗೆ ಮಾತಾಡಿ ಅದನ್ನು ಹೊಗಳಿದ್ದರು. ಆದರೆ ಕನ್ನಡದ ಬೇರೆ ಸೂಪರ್ ಸ್ಟಾರ್ಸ್ ಗಳು ಹಾಗು ಕನ್ನಡದ ದೊಡ್ಡ ದೊಡ್ಡ ನಿರ್ದೇಶಕರು ಕೆಜಿಫ್ ಚಿತ್ರದ ಬಗ್ಗೆ ಎಲ್ಲಿಯೂ ಮಾತಾಡಿಲ್ಲ. ಇದರ ಬಗ್ಗೆ ಒಂದು ಪ್ರಶ್ನೆ ಈಗ ಪ್ರತಿಯೊಬ್ಬ ಕನ್ನಡ ಚಿತ್ರ ರಸಿಕನಿಗೂ ಕಾಡುತ್ತಿದೆ. ನಮ್ಮವರೇ ನಮ್ಮನ್ನು ಯಾಕೆ ತುಳಿಯುತ್ತಿದ್ದಾರೆ ಎಂದು ಕೆಲವರು ಕೇಳುತ್ತಿದ್ದಾರೆ.
ಏನೇ ಆಗಲಿ ಸ್ನೇಹಿತರೆ! ಕೆಜಿಫ್ ಒಂದೊಳ್ಳೆ ಕನ್ನಡದ ಚಿತ್ರ. ಒಂದು ಹೆಮ್ಮೆಯ ಕನ್ನಡ ಚಿತ್ರ ಎಂದೇ ಹೇಳಬಹುದು. ಇಡೀ ದೇಶವೇ ಕೆಜಿಫ್ ಚಿತ್ರ ಬಗ್ಗೆ ಮಾತಾಡಿದೆ, ಕೆಜಿಫ್ ಚಿತ್ರವನ್ನು ಹಾಡಿ ಹೊಗಳಿದೆ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ 25 ದಿನ ಆದರೂ ನಾರ್ತ್ ಇಂಡಿಯಾ ದಲ್ಲಿ ಇನ್ನೂ ಕೂಡ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಇದೆ ಮೊದಲ ಬಾರಿಗೆ ಕೇರಳ ದಲ್ಲಿ, ಆಂಧ್ರ ದಲ್ಲಿ, ತಮಿಳು ನಾಡಿನಲ್ಲಿ, ದುಬೈ ನಲ್ಲಿ, ಅಮೇರಿಕಾದಲ್ಲಿ, ಪಾಕಿಸ್ತಾನದಲ್ಲಿ, ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರ ರಂಗಕ್ಕೆ ಒಳ್ಳೇದ್ ಆಗಲಿ, ಕನ್ನಡ ಚಿತ್ರಗಳ ಮಾರುಕಟ್ಟೆ ಇನ್ನೂ ಕೂಡ ಬೆಳೆಯಲಿ ಎಂಬುವುದು ನಮ್ಮ ಆಸೆ. ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top