News

ರಾತ್ರೋ ರಾತ್ರಿ ಫೇಮಸ್ ಆದ ಅಪ್ಪಟ ಕನ್ನಡ ಪ್ರತಿಭೆಗಳು! ಹನುಮಂತ ಹಾಗು ಜೂನಿಯರ್ ದರ್ಶನ್ ಅವಿನಾಶ್!

hanu-darshan

ಟ್ಯಾಲೆಂಟ್ ಇರುವವರಿಗೆ ಯಾವತ್ತಾದರೂ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ! ನಿಮ್ಮಲ್ಲಿ ದೃಢ ಮನಸ್ಸಿರಬೇಕು, ಕಷ್ಟ ಪಡಬೇಕು! ಒಂದು ದಿನ ಒಳ್ಳೇದ್ ಆಗುತ್ತದೆ! ಕನ್ನಡದಲ್ಲಿ ಇತ್ತೀಚಿಗೆ ಕುರಿ ಕಾಯುವ ಹುಡುಗ ಹನುಮಂತ ಹಾಗು ಜೂನಿಯರ್ ದರ್ಶನ್ ಅವಿನಾಶ್ ಅವರು ರಾತ್ರೋ ರಾತ್ರಿ ಇಡೀ ಕರ್ನಾಟಕದಲ್ಲಿ ಫೇಮಸ್ ಆದ ಉದಾಹರಣೆಗಳು! ಸುಮಾರು 3 ತಿಂಗಳ ಹಿಂದೆ ಹನುಮಂತ ಎಂಬ ಯುವಕ ತಾನು ಕುರಿ ಕಾಯುವಾಗ ಒಂದು ಹಾಡನ್ನು ಹಾಡಿ ಅದರ ಸೆಲ್ಫಿ ವಿಡಿಯೋ ಮಾಡಿ ಅದನ್ನು ಫೇಸ್ಬುಕ್ ನಲಿ ಹಾಕಿದ್ದನು. ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದರು.
ಹನುಮಂತ ಕೇವಲ ಒಂದು ದಿನದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಹೀರೋ ಆಗಿದ್ದನು. ಇದಲ್ಲದೆ ಇಡೀ ಕರ್ನಾಟಕದ ಮನೆ ಮಾತಾದನು. ಇದನ್ನು ನೋಡಿ ಜಿ ವಾಹಿನಿ ಅವರು ಹನುಮಂತನಿಗೆ ಕರೆದು ಸ ರೇ ಗ ಮ ಪ ದಲ್ಲಿ ಒಂದು ಅವಕಾಶ ಕೊಟ್ಟರು. ಇದಾದ ಮೇಲೆ ಹನುಮಂತನು ಹಿಂದುರುಗಿ ನೋಡಲೇ ಇಲ್ಲ! ಪ್ರತೀ ವಾರ ಒಂದರಕ್ಕಿಂತ ಒಂದು ಅದ್ಭುತ ಹಾಡುಗಳನ್ನು ಹಾಡಿ ಜನರನ್ನು ರಂಜಿಸುತ್ತಾ ಬರುತ್ತಿದ್ದಾನೆ. ಸದ್ಯ ಹನುಮಂತ ನಿಗೆ ಕನ್ನಡ ಚಿತ್ರಗಳಲ್ಲಿ ಹಾಡಲು ಅವಕಾಶಗಳು ಬರುತ್ತಿವೆ. ಈಗಾಗಲೇ ನಮ್ಮ ಯೋಗರಾಜ್ ಭಟ್ಟರು ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವರ ಸಿನೆಮಾಗೆ ಹಾಡಲು ಹನುಮಂತನಿಗೆ ಅವಕಾಶ ಕೊಟ್ಟಿದ್ದಾರೆ.
ಇನ್ನೊಂದೆಡೆ ಜೂನಿಯರ್ ದರ್ಶನ್ ಅವಿನಾಶ್! ಅವಿನಾಶ್ ಒಬ್ಬ ಬಹಲ್ ಟ್ಯಾಲೆಂಟ್ ಇರುವ ಹುಡುಗ ಹಾಗು ಇವನು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪಕ್ಕಾ ಅಭಿಮಾನಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಹಳ ದಿನಗಳಿಂದ ಅನುಕರಣೆ ಮಾಡುತ್ತಿದ್ದಾನೆ. ಈತ ಮೊದಲು ತನ್ನ ಫೇಸ್ಬುಕ್ ನಲ್ಲಿ, ದರ್ಶನ್ ಅವರ ಡೈಲಾಗ್ ಗಳನ್ನೂ, ಹಾಡುಲ್ಗನ್ನು ಅನುಕರಣೆ ಮಾಡಿ ಅದರ ವಿಡಿಯೋ ಹಾಕುತ್ತಿದ್ದನು. ನೋಡ್ತಾ ನೋಡ್ತಾ ಸೋಶಿಯಲ್ ಮೀಡಿಯಾ ದಲ್ಲಿ ಇವನ ವಿಡಿಯೋ ಗಳು ಸಕತ್ ವೈರಲ್ ಆಗಲು ಶುರು ಆಯಿತು. ಇದಲ್ಲದೆ ದರ್ಶನ್ ಅವರ ಫ್ಯಾನ್ ಪೇಜ್ಗಳಲ್ಲಿ ಕೂಡ ಇವನ ವಿಡಿಯೋ ಅಪ್ಲೋಡ್ ಮಾಡಲಾಯಿತು. ಇದನ್ನು ಗಮನಿಸಿದ ಕಲರ್ಸ್ ವಾಹಿನಿ ಅವರು ಇವನನ್ನು ಮಜಭಾರತ ಎಂಬ ರಿಯಾಲಿಟಿ ಶೋಗೆ ಆಹ್ವಾನ ಮಾಡಿದರು. ಒಂದು ಪುಟ್ಟ ಅವಕಾಶಕ್ಕಾಗಿ ಕಾಯುತ್ತಿದ್ದ ಅವಿನಾಶ್ ಅವರು ಹಿಂದೆ ಮುಂದೆ ನೋಡದೆ ಮಜಭಾರತ ರಿಯಾಲಿಟಿ ಶೋಗೆ ಬಂದರು. ವೇದಿಕೆ ಮೇಲೆ ಬಂದ ಒಂದೇ ಒಂದು ವಿಡಿಯೋ ಈಗ ಸಕತ್ ಸದ್ದು ಮಾಡಿದೆ. ಇದಲ್ಲದೆ ರಾತ್ರೋ ರಾತ್ರಿ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವಿನಾಶ್ ಅವರು ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ. ಇದಲ್ಲದೆ ಬಲ್ಲ ಮೂಲಗಳ ಪ್ರಕಾರ ಇವರನ್ನು ಕುದ್ದು ದರ್ಶನ್ ಅವರು ಭೇಟಿ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಮಜಭಾರತದಲ್ಲಿ ಜೂನಿಯರ್ ದರ್ಶನ್ ಆದ ಅವಿನಾಶ್ ಅವರ ಝಲಕ್ ಹೇಗಿತ್ತು ಈ ಕೆಳಗಿನ ವಿಡಿಯೋ ನೋಡಿರಿ
ಅವಿನಾಶ್ ಎಂಬ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪಕ್ಕಾ ಅಭಿಮಾನಿ, ದರ್ಶನ್ ಅವರ ಅನುಕರಣೆ ಯನ್ನು ಬಹಳ ಚನ್ನಾಗಿ ಮಾಡುತ್ತಾರೆ. ಅವರನ್ನು ನೋಡಿದ್ರೆ ಒಂದು ಕ್ಷಣ ನಮ್ಮ ದರ್ಶನ್ ಅವರನ್ನು ನೋಡಿದ ಹಾಗೆ ಆಗುತ್ತಾದೆ. ಅವರ ಮಾತಿನ ವರಸೆ, ಹಾವಾ ಭಾವ, ಸ್ಟೈಲ್ ಎಲ್ಲಾ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತರಹ ಮಾಡುತ್ತಾರೆ. ಅವಿನಾಶ್ ಅವರು ಬಹಳ ಅದ್ಭುತ ಪ್ರತಿಭೆ. ಈ ಹಿಂದೆ ಸೋಶಿಯಲ್ ಮೀಡಿಯಾ ಗಳಲ್ಲಿ ದರ್ಶನ್ ಅವರ ಅನುಕರಣೆಯನ್ನು ಮಾಡಿ ಅದರ ವಿಡಿಯೋ ಗಳನ್ನೂ ಹಾಕುತ್ತಿದ್ದರು. ಇವರ ಎಲ್ಲಾ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿವೆ. ಇವರ ಅದ್ಭುತ ಟ್ಯಾಲೆಂಟಿಗೆ ಒಂದು ಸಲಾಂ!
ಮಜಭಾರತ ಕಲರ್ಸ್ ಸೂಪರ್ ನಲ್ಲಿ ಬರುವಂತ ಒಂದು ಅದ್ಭುತ ಕಾಮೆಡಿ ರಿಲೈಟಿ ಶೋ! ಈ ಷೋ ಅಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಕನ್ನಡದ ಸಂಗೀತ ನಿರ್ದೇಶಕ ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ, ಹಾಗು ಮಜಭಾರತ ಷೋ ಅನ್ನು ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಾರೆ. ಮಜಾ ಭಾರತ ರಿಯಾಲಿಟಿ ಶೋನಲ್ಲಿ ಕರ್ನಾಟಕದ ಮೂಲೆ ಮೂಲೆ ಇಂದ ಸಕತ್ ಟ್ಯಾಲೆಂಟ್ ಇರುವ ಕಲಾವಿದರಿಗೆ ಒಂದು ಅದ್ಭುತ ಅವಕಾಶವನ್ನು ಕೊಡುತ್ತಾರೆ. ಈ ಶೋನಲ್ಲಿ ಹಾಸ್ಯಕ್ಕೆ ಮುಖ್ಯ ಆತಿಥ್ಯ ವನ್ನು ನೀಡಲಾಗಿದೆ. ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ಮೇಲೆ ಮಜಭಾರತ ರಿಯಾಲಿಟಿ ಶೋಗೆ ಅತೀ ಹೆಚ್ಚು TRP ಬರುತ್ತದೆ ಎಂದು ತಿಳಿದು ಬಂದಿದೆ.

Trending

To Top