ಕೀರ್ತಿ ಸುರೇಶ್ ಬಗ್ಗೆ ಫನ್ನಿ ಕಾಮೆಂಟ್ಸ್ ಮಾಡಿದ ಚಿರು, ನೀನು ನನ್ನ ತಂಗಿಯಲ್ಲ, ಆ ಫಿಲಿಂಗ್ ಬೇಡ ಎಂದ ಮೆಗಾಸ್ಟಾರ್….!

ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾ ಶಂಕರ್‍ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಅಬ್ಬರಿಸಲಿದೆ. ಆ.11 ರಂದು ಈ ಸಿನೆಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ.…

ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾ ಶಂಕರ್‍ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಅಬ್ಬರಿಸಲಿದೆ. ಆ.11 ರಂದು ಈ ಸಿನೆಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ಇತ್ತೀಚಿಗಷ್ಟೆ ಹೈದರಾಬಾದ್ ನ ಶಿಲ್ಪಕಳಾ ವೇದಿಕೆಯಲ್ಲಿ ಅದ್ದೂರಿಯಾಗಿ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್‍ ಚಿರಂಜೀವಿ ನಟಿ ಕೀರ್ತಿ ಸುರೇಶ್ ಬಗ್ಗೆ ಫನ್ನಿ ಕಾಮೆಂಟ್ಸ್ ಮಾಡಿದ್ದಾರೆ.

ಮೆಹರ್‍ ರಮೇಶ್ ನಿರ್ದೇಶನದಲ್ಲಿ ತೆರೆಕಂಡ ಭೋಳಾಶಂಕರ್‍ ಸಿನೆಮಾದಲ್ಲಿ ಹಿರೋ ಆಗಿ ಮೆಗಾಸ್ಟಾರ್‍ ಚಿರಂಜೀವಿ ಬಣ್ಣ ಹಚ್ಚಿದ್ದಾರೆ. ವರ್ಷದ ಆರಂಭದಲ್ಲಿ ತೆರೆಕಂಡ ವಾಲ್ತೇರು ವೀರಯ್ಯ ಸಿನೆಮಾ ಭಾರಿ ಹಿಟ್ ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಸಿನೆಮಾದ ಮೇಲೂ ಭಾರಿ ನಿರೀಕ್ಷೆ ಹುಟ್ಟಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಇದೀಗ ಸಿನೆಮಾ ಬಿಡುಗಡೆಗೆ ಸಮಯ ಹತ್ತಿರ ಬರುತ್ತಿದ್ದು, ಸಿನೆಮಾದ ಪ್ರಿ ರಿಲೀಸ್ ಈವೆಂಟ್ ಗಳೂ ಸಹ ಜೋರಾಗಿಯೇ ಆಯೋಜಿಸಿದೆ ಚಿತ್ರತಂಡ. ಇತ್ತೀಚಿಗೆ ಹೈದರಾಬಾದ್ ನಲ್ಲೂ ಸಹ ಪ್ರಿ ರಿಲೀಸ್ ಈವೆಂಟ್ ನಡೆದಿದ್ದು, ಈ ವೇಳೆ ಚಿರಂಜೀವಿ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಅವರು ವೈರಲ್ ಆಗುತ್ತಿವೆ.

ಇನ್ನೂ ಈವೆಂಟ್ ನಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಮಾತನಾಡುತ್ತಾ ಕೀರ್ತಿ ಸುರೇಶ್ ರವರನ್ನು ಹೊಗಳಿದ್ದಾರೆ ಜೊತೆಗೆ ಆಕೆಯ ಬಗ್ಗೆ ಕೆಲವೊಂದು ಫನ್ನಿ ಕಾಮೆಂಟ್ಸ್ ಸಹ ಮಾಡಿದ್ದಾರೆ. ಈ ಸಿನೆಮಾದಲ್ಲಿ ನಾವು ಅಣ್ಣ ತಂಗಿಯಾಗಿ ನಟಿಸಿದ್ದೇವೆ. ಸೋದರ ಪ್ರೀತಿ ಬರುತ್ತಿದ್ದರೂ ನಾನು ಅದನ್ನು ತಡೆಯುತ್ತಿದ್ದೇನೆ. ಕಾರಣ ನನ್ನ ಮುಂದಿನ ಸಿನೆಮಾದಲ್ಲಿ ಆಕೆ ಹಿರೋಯಿನ್ ಆಗಿ ನಟಿಸಬೇಕೆಂಬ ಬಯಕೆ ನನಗಿದೆ. ಅದಕ್ಕಾಗಿಯೇ ಅಣ್ಣಾ ತಂಗಿ ಎಂಬ ಭಾವನೆ ಆಗ ಕಿರಿಕಿರಿ ಅನ್ನಿಸಬಹುದು. ನೀನು ಅಣ್ಣ ಎಂಬ ಫೀಲಿಂಗ್ ತೆಗೆದು ಹಾಕು. ನಿನಗೆ ಅಣ್ಣನಾಗಿ ಮೆಹರ್‍ ರಮೇಶ್ ಇದ್ದಾರೆ. ನಾನಲ್ಲ ಎಂದು ಕೀರ್ತಿ ಸುರೇಶ್ ಗೆ ಮೊದಲನೇ ದಿನದ ಶೂಟಿಂಗ್ ವೇಳೆ ಹೇಳಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಕೀರ್ತಿ ಸುರೇಶ್ ಅವರ ತಾಯಿ ಜೊತೆಗೆ ನಾನು ಪುನ್ನಮಿನಾಗು ಎಂಬ ಸಿನೆಮಾದಲ್ಲೂ ನಟಿಸಿದ್ದೆ. ಆ ಅನುಬಂಧ ಅವರ ಫ್ಯಾಮಿಲಿ ಜೊತೆಗೆ ಮುಂದುವರೆಯುತ್ತಿದೆ. ಕೀರ್ತಿ ಸುರೇಶ್ ಒಳ್ಳೆಯ ಸಕ್ಸಸ್ ಸಾಧಿಸುತ್ತಿದ್ದಾರೆ. ಮಹಾನಟಿ ಸಿನೆಮಾ ನೋಡಿ ನಾನು ಮಂತ್ರಮುಗ್ದನಾಗಿದ್ದೆ. ಮಹಾನಟಿ ಚಿತ್ರತಂಡವನ್ನು ಕರೆದು ಕೀರ್ತಿಗೆ ರಾಷ್ಟ್ರೀಯ ಅವಾರ್ಡ್ ಸಿಗುತ್ತೆ ಎಂದು ಹೇಳಿದ್ದೆ. ಅದರಂತೆ ಆಕೆ ಅವಾರ್ಡ್ ಬಂತು. ಆಕೆ ಭೋಳಾ ಶಂಕರ್‍ ಸಿನೆಮಾ ಒಪ್ಪಿಕೊಂಡಿದ್ದಕ್ಕೆ ಧನ್ಯವಾದ ಎಂದರು.

ಅಷ್ಟೇ ಅಲ್ಲದೇ ಕೀರ್ತಿ ಸುರೇಶ್ ನಮ್ಮ ಮನೆಯ ಊಟ ತಿಂದು ಮತಷ್ಟು ಗ್ಲಾಮರಸ್ ಆಗಿದ್ದಾರೆ. ಚಿರಂಜೀವಿ ಕೀರ್ತಿ ಸುರೇಶ್ ಪಕ್ಕ ನಿಂತು ಕಾಮೆಂಟ್ಸ್ ಮಾಡಿದ್ದಾರೆ. ಈ ವೇಳೆ ಕೀರ್ತಿ ಸುರೇಶ್ ಸಹ ನಗುತ್ತಿರುತ್ತಾರೆ. ಸದ್ಯ ಈ ಪೊಟೋಗಳು, ವಿಡಿಯೋಗಳು ಹಾಗೂ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.