ಭಿಕ್ಷುಕಿ ಬಾಲಕಿಯನ್ನು ಬಿಡದ ಕಾಮುಕರು, ಭಿಕ್ಷುಕಿಯ ಕೈ ಕಾಲು ಕಟ್ಟಿಹಾಕಿ ಎತ್ತಾಕೊಂಡು ಹೋದ ಕಾಮುಕರು….!

ಮಹಿಳೆಯರ ಮೇಲೆ ದೌರ್ಜನ್ಯಗಳು ಹಾಗೂ ಲೈಂಗಿಕ ಹಲ್ಲೆಗಳು ನಡೆಯುತ್ತಲೇ ಇದೆ. ಕೆಲ ಕಾಮುಕರು ಪುಟ್ಟ ಬಾಲಕಿಯಿಂದ ಹಿಡಿದು ಮುದುಕರನ್ನೂ ಸಹ ಬಿಡುತ್ತಿಲ್ಲ. ಇದೀಗ ಕೇರಳದಲ್ಲಿ ಭಿಕ್ಷೆ ಬೇಡುವ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆಯೊಂದು…

ಮಹಿಳೆಯರ ಮೇಲೆ ದೌರ್ಜನ್ಯಗಳು ಹಾಗೂ ಲೈಂಗಿಕ ಹಲ್ಲೆಗಳು ನಡೆಯುತ್ತಲೇ ಇದೆ. ಕೆಲ ಕಾಮುಕರು ಪುಟ್ಟ ಬಾಲಕಿಯಿಂದ ಹಿಡಿದು ಮುದುಕರನ್ನೂ ಸಹ ಬಿಡುತ್ತಿಲ್ಲ. ಇದೀಗ ಕೇರಳದಲ್ಲಿ ಭಿಕ್ಷೆ ಬೇಡುವ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆಯೊಂದು ನಡೆದಿದೆ. ಕಾರಿನಲ್ಲಿ ಭಿಕ್ಷೆ ಬೇಡುವ ಬಾಲಕಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗುವಾಗ ಅಪಘಾತವಾಗಿದೆ. ಈ ಸಮಯದಲ್ಲಿ ಕಿಡ್ನಾಪ್ ಮಾಡಿದ ವಿಚಾರ ತಿಳಿದಿದ್ದು, ಕಾರಿನಲ್ಲಿದ್ದ ಕಾಮುಕರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಕೇರಳದಿಂದ ಬಂದ ನಾಲ್ವರ ಗುಂಪೊಂದು ಈ ಕೃತ್ಯವೆಸಗಿದೆ. ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಬಂದ ಅಪ್ರಾಪ್ತ ಬಾಲಕಿಯನ್ನು ಅಪರಹರಣ ಮಾಡಿದ ಈ ಗ್ಯಾಂಗ್ ರಾಜ್ಯದ ಗಡಿಯನ್ನು ದಾಟಿ ಎಸ್ಕೇಪ್ ಆಗುವಾಗ ಅಪಘಾತವಾಗಿದೆ. ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬನಿಗೆ ಈ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಗ್ರಾಮಸ್ಥರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಕಾರಿನಲ್ಲಿ ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಕೂಡಿಹಾಕಿರುವುದು ಕಂಡುಬಂದಿದೆ. ಕೂಡಲೇ ಗ್ರಾಮದ ಹಿರಿಯರು ಹಾಗೂ ಯುವಕರು ಕಾರಿನಲ್ಲಿದ್ದವರನ್ನು ಇಳಿಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಈ ಕೃತ್ಯವೆಸಗಿದ ನಾಲ್ಕು ಯುವಕರಿಗೂ ಸ್ಥಳೀಯರು ಚೆನ್ನಾಗಿ ಥಳಿಸಿದ್ದಾರೆ.

ಇನ್ನೂ ಬಾಲಕಿಯನ್ನು ಸ್ಥಳೀಯರು ವಿಚಾರಣೆ ಮಾಡಿದಾಗ ಆಕೆ ಕೊಳ್ಳೆಗಾಲದ ಬಸ್ ನಿಲ್ದಾಣದ ಬಳಿ ಭಿಕ್ಷೆ ಬೇಡುತ್ತಿದ್ದಳಂತೆ. ಕಾರಿನ ಬಳಿ ಭಿಕ್ಷೆ ಬೇಡಲು ಹೋದಾಗ, ಅವರು ನನ್ನನ್ನು ಕಾರಿನೊಳಗೆ ಎಳೆದುಕೊಂಡು ಬಾಯಿಗೆ ಬಟ್ಟೆ ತುರುಕಿ ಕರೆದುಕೊಂಡರು ಹೋಗಿದ್ದಾರೆ. ನನ್ನನ್ನು ರಕ್ಷಣೆ ಮಾಡಿ ಎಂದು ಬಾಲಕಿ ಕಣ್ಣೀರಾಕಿದ್ದಾರೆ. ನಂತರ ಗ್ರಾಮಸ್ಥರು ಬಾಲಕಿಯನ್ನು ರಕ್ಷಣೆ ಮಾಡಿ ಕಿಡ್ನಾಪ್ ಮಾಡಿದಂತಹ ಯುವಕರನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯನ್ನು ಸಹ ಪೊಲೀಸ್ ಠಾಣೆಗೆ ಒಪ್ಪಿಸಿ ಆಕೆಯ ಕುಟುಂಬದೊಂದಿಗೆ ಸೇರಿಸಲು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಮಧುವನಹಳ್ಳಿಯ ಗ್ರಾಮಸ್ಥರು ಕೇರಳದ ಯುವಕರಿಂದ ಕಿಡ್ನಾಪ್ ಆಗಿದ್ದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಮಧುವನಹಳ್ಳಿ ಗ್ರಾಮಸ್ಥರೇ ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಾಲಕಿಯ ನೆರವಿಗೆ ನಿಂತಿದ್ದಾರೆ.