Karnataka

ಮೈಸೂರು ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ ಜಿಲ್ಲಾಧಿಕಾರಿ

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗಿದ್ದು, ಪಿಪಿಇ, ಮಾಸ್ಕ್ಗಳ ಕೊರತೆ ಇಲ್ಲ ಎಂದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ವಾರದಲ್ಲಿ ೨೦ ಪಾಸಿಟಿವ್ ಕೇಸ್ ಬರುತ್ತಿದ್ದವು. ಈಗ ಅಂತಹ ಪರಿಸ್ಥಿತಿಯಿಂದ ಹೊರ ಬಂದಿದ್ದೇವೆ. ಇನ್ನು ನಿತ್ಯವೂ ಮೂರು ಶಿಫ್ಟ್‌ಗಳಲ್ಲಿ ಮಾದರಿ ಸಂಗ್ರಹಣೆ ನಡೆಯುತ್ತಿದೆ. ಸ್ಯಾಂಪಲ್ ಕಲೆಕ್ಷನ್,ರಿಪೋರ್ಟ್ ತರಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿದೆ. ಅಲ್ಲದೇ ಜ್ಯುಬಿಲಿಯೆಂಟ್ ಕಾರ್ಖಾನೆ ಪ್ರೈಮರಿ, ಸೆಕೆಂಡರಿ Contact ಟೆಸ್ಟಿಂಗ್ ಮುಕ್ತಾಯವಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಅಲ್ಲದೇ ಮೈಸೂರಿಗೆ Rapid ಟೆಸ್ಟಿಂಗ್ ಕಿಟ್ ಇನ್ನೂ ಬಂದಿಲ್ಲ. ಬೇರೆ ಜಿಲ್ಲೆಗಳಿಗೆ ಕೊಟ್ಟಿದ್ದಾರೆ. ನಮ್ಮಲ್ಲಿ ಇನ್ನಷ್ಟೇ ಸ್ವೀಕೃತಿ ಆಗಬೇಕಿದೆ. ಐಸೋಲೇಷನ್ ಆಸ್ಪತ್ರೆ ಜೊತೆಗೆ ಇಎಸ್‌ಐ ಆಸ್ಪತ್ರೆಯಲ್ಲಿ ೧೦೦ ಬೆಡ್ ರೆಡಿ ಇಟ್ಟುಕೊಂಡಿದ್ದೇವೆ. ೨೫ ವೆಂಟಿಲೇಟರ್ ಕೂಡ ಇವೆ. ಬಿ.ಎಂ.ಆಸ್ಪತ್ರೆಯನ್ನು ಕ್ವಾರಂಟೈನ್ ಮಾಡಲು ಮಾತ್ರ ಬಳಸಿಕೊಳ್ಳುತ್ತೇವೆ ಎಂದು ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.

Trending

To Top