ಡಾ.ವಿಠಲ್ ರಾವ್, ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿ.. ಈ ಡೈಲಾಗ್ ಯಾರಿಗೆ ತಾನೇ ನೆನಪಿರಲ್ಲ,, ಕೆಲ ವರ್ಷಗಳ ಹಿಂದೆ ಸಿಲ್ಲಿ ಲಲ್ಲಿ ಧಾರಾವಾಹಿ ಅಂದ್ರೆ ಮನೆಮಂದಿ ಎಲ್ಲಾ ವೀಕ್ಷಿಸಿ ನಗೆಗಡಲಲ್ಲಿ ತೇಲುತ್ತಿದ್ದಾರು . ಈಗ ಮತ್ತೆ ಪ್ರಸಾರವಾಗುತ್ತಿದೆ ಸಿಲ್ಲಿ ಲಲ್ಲಿ.. ಆ ಮೂಲಕ ಏನೋ ಆತಂಕದಲ್ಲಿರುವ ಜನರಿಗೆ ತುಸು ನಗು ಸಿಗುವುದಂತೂ ಗ್ಯಾರಂಟಿ.
2000 ಇಸವಿಯಿಂದ ಸುಮಾರು ವರ್ಷಗಳ ಕಾಲ ಕನ್ನಡ ಕಿರುತೆರೆಯನ್ನು ಆಳಿದ, ವೀಕ್ಷಕರನ್ನು ನಕ್ಕುನಗಿಸಿದ ಧಾರಾವಾಹಿ ಸಿಲ್ಲಿಲಲ್ಲಿ . ಬಹುದಿನಗಳ ಅಭಿಮಾನಿಗಳ ಅಭಿಮಾನದ ಬೇಡಿಕೆಗೆ ಸ್ಪಂದಿಸಿರುವ ಕಲರ್ಸ್ ಕನ್ನಡ ವಾಹಿನಿ ಹಳೆಯ ಧಾರಾವಾಹಿಯನ್ನು ನಿನ್ನೆಯಿಂದ ರಿಂದ ಬೆಳಿಗ್ಗೆ 10 ಗಂಟೆಗೆ ಮರುಪ್ರಸಾರ ಮಾಡುತ್ತಿದ್ದಾರೆ .
ದೂರದರ್ಶನದಲ್ಲಿ ರಾಮಾಯಣ ಮತ್ತು ಮಹಾಭಾರತ ಮರುಪ್ರಸಾರವಾಗುತ್ತಿದ್ದು ನೋಡುಗರಿಂದ ಭರ್ಜರಿ ರೆಸ್ಪಾನ್ಸ್ ದೊರಕಿದೆ . ಇದೀಗ ಇತರೆ ಚಾನೆಲ್ ಗಳೂ ಕೂಡ ಇದನ್ನೇ ಅನುಸರಿಸುತ್ತಿವೆ . ಅದರ ಮೊದಲ ಹೆಜ್ಜೆಯಾಗಿ ಸಿಲ್ಲಿಲಲ್ಲಿಯು ಮರುಪ್ರಸಾರವಾಗುತ್ತಿರುವುದು ಜನರಿಗೆ ಹೆಚ್ಚು ಖುಷಿ ನೀಡಿದೆ.
ಸಿಲ್ಲಿಲಲ್ಲಿಯ ಮರುಪ್ರಸಾರದ ವಿಷಯವನ್ನು ರವಿಶಂಕರ್ ಗೌಡ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಖುಷಿಯಿಂದ ಶೇರ್ ಮಾಡಿಕೊಂಡಿದ್ದಾರೆ . ರವಿಶಂಕರ್ ಗೌಡ ಅವ್ರಿಗೆ ಈ ಧಾರಾವಾಹಿ ಮತ್ತು ಆ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ ಎನ್ನುವುದು ಮತ್ತೊಂದು ವಿಶೇಷ .
ಅಭಿಮಾನಿಗಳ ಅಭಿಮಾನಕ್ಕೆ ಸ್ಪಂದಿಸಿ
ಅವರ ನಚ್ಚಿನ ಧಾರವಾಹಿ " ಸಿಲ್ಲಿ ಲಲ್ಲಿ "
ಮರು ಪ್ರಸಾರ ಮಾಡುತ್ತಿರುವುದಕ್ಕೆ
ವೈಯಕ್ತಿಕವಾಗಿ ಹಾಗೂ ಕರುನಾಡ ಜನತೆಯ ಪರವಾಗಿ Colors Kannada ದವರಿಗೆ
ತುಂಬು ಹೃದಯದ ಧನ್ಯವಾದಗಳು…🙏 https://t.co/JGCq6ml996— ರವಿಶಂಕರ ಗೌಡ (@RavishankarGow5) April 14, 2020
